Select Your Language

Notifications

webdunia
webdunia
webdunia
Tuesday, 8 April 2025
webdunia

ಕೇಬಲ್ ಆಪರೇಟರ್ ಸಂಘದಿಂದ ಪ್ರತಿಭಟನೆ

ಕೇಬಲ್
ವಿಜಯಪುರ , ಗುರುವಾರ, 13 ಡಿಸೆಂಬರ್ 2018 (19:04 IST)
ಕೇಬಲ್ ಆಪರೇಟರ್ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ.

ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆದಿದ್ದು, ನಗರದ ಗೋದಾವರಿ ಹೊಟೇಲದಿಂದ ಗಾಂಧಿ ಚೌಕ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಕೇಬಲ್ ಆಪರೇಟರ್ ಸಂಘದವರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರ ಸರ್ಕಾರದ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಟ್ರಾಯ್ ಎಮ್.ಆರ್.ಪಿ ಎಂಬ ಹೊಸ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಟ್ರಾಯ್ ಎಮ್.ಆರ್.ಪಿ ಇಂದ ಗ್ರಾಹಕರು ಕಟ್ಟುವ ಹಣದ ಬಿಲ್ಲು ಹೆಚ್ಚಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ಹೊರೆ ಹೆಚ್ಚಾಗುತ್ತದೆ.

ಹೀಗಾಗಿ ಟ್ರಾಯ್ ಎಮ್.ಆರ್. ಪಿ ನೀತಿ ತಕ್ಷಣ ಕೈ ಬಿಡಬೇಕು ಎಂದು ಆಗ್ರಹ ಮಾಡಿದರು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ವಿಚಾರಣೆ