Publish Date: Fri, 14 Dec 2018 (17:48 IST)
Updated Date: Fri, 14 Dec 2018 (17:54 IST)
ಜಿಲ್ಲಾ ಪಂಚಾಯತ್ ಸಿಇಓ ಮೇಲೆ ಎಸಿಬಿ ಪ್ರಕರಣ ದಾಖಲಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ ತೀವ್ರಗೊಂಡಿದೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಓ ಉದ್ಯೋಗಖಾತ್ರಿ ಯೋಜನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಎಸಿಬಿ ಪ್ರಕರಣ ದಾಖಲಿಸಿರುವ ಅಧ್ಯಕ್ಷರ ನಡೆ ಖಂಡನೀಯ ಎಂದು ಉದ್ಯೋಗಖಾತ್ರಿ ಕೂಲಿಕಾರ್ಮಿಕರಿಂದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ನಡೆಯಿತು.
ಎಸಿಬಿ ಪ್ರಕರಣ ದಾಖಲಿಸಿದ್ದನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಾಪಸ್ಸು ಪಡೆಯಬೇಕೆಂದು ಆಗ್ರಹ ಮಾಡಲಾಯಿತು. ಎಸಿಬಿ ಕೇಸ್ ನ್ನು ವಾಪಸ್ಸು ಪಡೆಯುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಕೂಲಿಕಾರರು ಪಟ್ಟು ಹಿಡಿದಿದ್ದಾರೆ.