Select Your Language

Notifications

webdunia
webdunia
webdunia
webdunia

ಪತ್ನಿಯ ತಂಗಿಯ ಮೇಲಿನ ಮೋಹಕ್ಕಾಗಿ ಸುಪಾರಿ ನೀಡಿದ ಖದೀಮ

ಪತ್ನಿಯ ತಂಗಿಯ ಮೇಲಿನ ಮೋಹಕ್ಕಾಗಿ ಸುಪಾರಿ ನೀಡಿದ ಖದೀಮ
ಬೆಂಗಳೂರು , ಗುರುವಾರ, 20 ಫೆಬ್ರವರಿ 2020 (16:38 IST)
ಪತ್ನಿಯ ತಂಗಿಯ ಮೇಲೆ ಮೋಹಗೊಂಡಿದ್ದ ಭೂಪನೊಬ್ಬ ಆಕೆಯ ಗಂಡನ ಕಥೆ ಮುಗಿಸೋಕೆ ಸುಪಾರಿ ನೀಡಿದ ಘಟನೆ ನಡೆದಿದೆ.

ಹೈದ್ರಾಬಾದ್ ಮೂಲದ ಸತ್ಯ ಅನ್ನೋನು ಶ್ರೀಜಾಳನ್ನು ಮದುವೆಯಾಗಿದ್ದನು. ಆದರೆ ಮದುವೆಗೂ ಮೊದಲೇ ಶ್ರೀಜಾಳ ತಂಗಿಯ ಮೇಲೆ ಮೋಹಗೊಂಡು ಒನ್ ಸೈಡ್ ಲವ್ ಮಾಡ್ತಿದ್ದನು.

ಶ್ರೀಜಾಳನ್ನು ಟೆಕ್ಕಿ ಲಕ್ಷ್ಮಣ ಕುಮಾರ್ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ ಹೇಗಾದರೂ ಮಾಡಿ ಶ್ರೀಜಾಳನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಂತಿದ್ದ ಸತ್ಯ, ಟೆಕ್ಕಿ ಲಕ್ಷ್ಮಣ ಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದನು.

ಫೆ. 3 ರಂದು ಟೆಕ್ಕಿ ಲಕ್ಷ್ಮಣ ಹತ್ಯೆಯಾಗಿತ್ತು. ಕೇಸ್ ನ ಬೆನ್ನುಹತ್ತಿದ್ದ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಗಂಡ ಸತ್ತರೆ ಶ್ರೀಜಾಳು ತನ್ನ ಮನೆಗೆ ಬಂದು ತನ್ನೊಂದಿಗೆ ಇರುತ್ತಾಳೆ ಅಂತ ಸತ್ಯ ಮಾಡಿದ್ದ ಪ್ಲ್ಯಾನ್ ಇದೀಗ ಉಲ್ಟಾ ಆಗಿದ್ದು, ಆತನನ್ನು ಕಂಬಿ ಹಿಂದೆ ತಳ್ಳಲಾಗಿದೆ.

ಬೆಂಗಳೂರಿನ ಮಹಾದೇವಪುರ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಆಪರೇಷನ್ ಕಮಲ ಶುರು : ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು?