Webdunia - Bharat's app for daily news and videos

Install App

ಅಂಬರೀಶ್ ಗೆ ಕಬ್ಬಿನ ಅಲಂಕಾರ ಏಕೆ ಗೊತ್ತಾ?

Webdunia
ಗುರುವಾರ, 6 ಡಿಸೆಂಬರ್ 2018 (18:10 IST)
ಚಲನಚಿತ್ರ ಹಿರಿಯ ನಟ ಹಾಗೂ ಕೇಂದ್ರ ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಗೆ ಅವರ ಅಭಿಮಾನಿಗಳು ವಿನೂತನವಾಗಿ ಗೌರವ ನಮನ ಸಲ್ಲಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬಿ.ಹೊಸೂರು ಗ್ರಾಮದಲ್ಲಿ ಅಭಿಮಾನಿಗಳಿಂದ ಅಗಲಿದ ಚಿತ್ರನಟ ಅಂಬರೀಶ್ ರ ತಿಥಿ ಕಾರ್ಯ ನೆರವೇರಿತು. ಗ್ರಾಮಸ್ಥರು ಅಂಬಿಯ ಪ್ರತಿಮೆಗೆ ಕಬ್ಬಿನಿಂದ ಅಲಂಕಾರ ಮಾಡಿ ಗೌರವ ಸಲ್ಲಿಸಿದರು. ಅಂಬಿ ಪ್ರತಿಮೆಗೆ ನಾಟಿ ಕೋಳಿ, ಮುದ್ದೆ ಎಡೆಯಿಟ್ಟು ನಮನ ಸಲ್ಲಿಸಿದರು.

ಅಂಬಿ ಪ್ರತಿಮೆಯನ್ನು ಕಬ್ಬಿನಿಂದ ಅಲಂಕರಿಸಿ, ಕಬ್ಬಿನ ಹಾರ ಹಾಕಿ ವಂದನೆ ಸಲ್ಲಿಸಲಾಯಿತು. ಅಂಬಿಯನ್ನು ನೆನೆದು ಭಾವುಕರಾಗುತ್ತಿರುವ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಗುಣಗಾನ ಮಾಡಿದರು.

ಅಂಬಿ ಮೃತಪಟ್ಟ ನಂತರ ಬಿ.ಹೊಸೂರು ಗ್ರಾಮದಲ್ಲಿ ಪ್ರತಿಮೆಯನ್ನು ಗ್ರಾಮಸ್ಥರು ಸ್ಥಾಪಿಸಿದ್ದಾರೆ. ಪ್ರತಿಮೆಗೆ ಕಬ್ಬಿನಿಂದ ಅಲಂಕಾರ ಮಾಡಿ, ಕಬ್ಬಿನ ಹಾರ ಹಾಕಿ ತವರು ಜಿಲ್ಲೆಯ ಗೌರವ ಸಲ್ಲಿಸುತ್ತಿರುವ ಅಭಿಮಾನಿಗಳು, ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments