Webdunia - Bharat's app for daily news and videos

Install App

ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್ಪೆಕ್ಟರ್ ಹೆಂಡತಿ ‌ಆತ್ಮಹತ್ಯೆ

Webdunia
ಶನಿವಾರ, 3 ಜೂನ್ 2023 (20:10 IST)
ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್ಪೆಕ್ಟರ್ ಹೆಂಡತಿ ‌ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಗೂರಿನ ಪಟೇಲ್‌ ಬಡಾವಣೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ವಿ ಗೊಲ್ಲಹಳ್ಳಿಯ ನಿವಾಸಿಯಾಗಿದ್ದ ಶಿಲ್ಪಾ ಚಿಂತಾಮಣಿ ಮೂಲದ  ಪಿಎಸ್ ಐ ರಮೇಶ್ ಅವರನ್ನ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರು ಕೂಡ ಕಾಲೇಜು ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ರು ಮದುವೆ ಕೂಡ ಆಗಬೇಕು ಅನ್ನಕೊಂಡಿದ್ರು ಅದು ಯಾವಾಗ ಶಿಲ್ಪಾ ಪರಿಶಿಷ್ಟ ಜಾತಿಗೆ ಸೇರಿದ್ದವಳು ಎಂದು ಗೊತ್ತಾಯ್ತೋ ಆವಾಗನಿಂದ ಅವೈಡ್ ಮಾಡೋಕೆ ಶುರುಮಾಡಿದ್ದ ಆದ್ರು ಕೂಡ ಪಟ್ಟುಬಿಡದ  ಶಿಲ್ಪಾ ಮನೆಗೆ ಕರೆದುಕೊಂಡು ‌ಹೋಗಿ ಒಪ್ಪಿಸಿದ್ಲು. ಇನ್ನೂ ಪ್ರೊಬೆಷನರಿಯಾಗಿದ್ದ ರಮೇಶ್ ಬೇಗೂರು ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ರು.ಇತ್ತ ಜಾತಿಯ ನೆಪವೊಡ್ಡಿ ಶಿಲ್ಪಾ ಳನ್ನ ಅವೈಡ್ ಮಾಡಿದ್ದ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಮನವೋಲಿಸಿ ಸಬ್ ರಿಜಿಸ್ಟ್ರಾರ್ ಆಪೀಸ್ ನಲ್ಲಿ ಮದುವೆ ಮಾಡಿಸಿದ್ರು ಆದ್ರೂ ಕೂಡ ನಮ್ಮ ಮನೆಯಲ್ಲಿ ಒಪ್ಪೋದಿಲ್ಲ ಎಂದು ಬೇರೆ ಮನೆ ಮಾಡಿಯಿಟ್ಟಿದ್ರಂತೆ .ನಮ್ಮ ಅಕ್ಕನ ಮಗಳನ್ನ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒತ್ತಾಯ ಮಾಡುತ್ತಿದ್ದಾರೆ ನಿನಗೆ ಒಂದಿಷ್ಟು ಹಣ ಕೊಡುತ್ತೇನೆ ನನ್ನನ ಬಿಟ್ಟು ಬಿಡು ಎಂದು ಪ್ರತಿದಿನ ಮಾನಸಿಕ‌ ಹಿಂಸೆ ನೀಡುತ್ತಿದ್ದನಂತೆ. ನಿನ್ನೆ ಕೂಡ ಹೀಗೆ ಮಾಡಿದ್ದಾನೆಂದು ಮನೆಯವರಿಗೆ ಕಾಲ್ ಮಾಡಿದ್ದ ಶಿಲ್ಪಾ. ಇಂದು‌ ಬೆಳಗ್ಗೆ ಮನೆಯ ಬಾಗಿಲು ತೆಗೆಯದಿದ್ದಾಗ ಗಾಬಾರಿಯಾದ ಮನೆಯ ಓನರ್ ಕಾಲ್ ಮಾಡಿ ತಿಳಿಸಿದ್ದಾರೆ ಇನ್ನೂ ಮನೆಯ ಹತ್ತಿರ ಬಂದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಸಂಬಂದ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments