Publish Date: Thu, 06 Feb 2020 (14:44 IST)
Updated Date: Thu, 06 Feb 2020 (14:46 IST)
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ್ನು ಕೇಂದ್ರ ಸರಕಾರ ಸ್ಥಾಪನೆ ಮಾಡಿದ ಬಳಿಕ ಹೇಳಿಕೆ ನೀಡಿದ್ದ ಪ್ರಧಾನಿ ಮಾತಿಗೆ ಖರ್ಗೆ ಸಿಡಿಮಿಡಿಗೊಂಡಿದ್ದಾರೆ.
ಟ್ರಸ್ಟ್ ನಲ್ಲಿ ದಲಿತರಿಗೆ ಸ್ಥಾನ ನೀಡಿದ್ದೇವೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಲಿತರು ಹಿಂದು ಧರ್ಮದವರೇ ಆಗಿದ್ದು, ಹಿಂದು ಸಮಾಜದ ಭಾಗವಾಗಿದ್ದಾರೆ. ಆದರೆ ಪದೇ ಪದೆ ಬಿಜೆಪಿಯರು ದಲಿತರು ಅಂತ ಒತ್ತಿ ಹೇಳೋದು ಸರಿಯಲ್ಲ ಅಂತ ಹೇಳಿದ್ದಾರೆ.
ಬಿಜೆಪಿಯವರು ಮಾತ್ರ ಹಿಂದೂ ಧರ್ಮವನ್ನ ಟೆಂಡರ್ ಹಿಡಿದಿದ್ದಾರಾ? ಅಂತ ಖರ್ಗೆ ಪ್ರಶ್ನೆ ಮಾಡಿದ್ದಾರೆ.