ಶ್ರೀಲೀಲಾ ಐಷಾರಾಮಿ ಜೀವನದಿಂದ ನಿರ್ಮಾಪಕರಿಗೆ ನಷ್ಟ.?

Webdunia
ಭಾನುವಾರ, 18 ಸೆಪ್ಟಂಬರ್ 2022 (14:14 IST)
2019ರಲ್ಲಿ ಕಿಸ್  ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಂದಿನಿ ಎಂದು ಪರಿಚಯವಾದ ಶ್ರೀಲೀಲಾ ಎರಡನೇ ಸಿನಿಮಾವೂ ಸೂಪರ್ ಹಿಟ್. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಟಿಸಿದ ನಂತರ ತೆಲುಗು ಸಿನಿಮಾ ಕೈ ಸೇರಿತ್ತು. ಪೆಲ್ಲಿ ಸಂದಡಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು ಆದರೆ ಲೀಲಾ ಬುಟ್ಟಿಗೆ ಸ್ಟಾರ್ ಸಿನಿಮಾಗಳ ಕಥೆ ಬಂದು ಬಿತ್ತು.
ಶ್ರೀಲೀಲಾ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೂ ಸಿನಿಮಾ ಮ್ಯಾನೇಜ್ ಮಾಡಲು ಕಾರಣ ಅವರ ತಾಯಿ ಸ್ವರ್ಣಲತಾ.
 
ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವೈದ್ಯೆ. ಅವರ ಕೈ ಗುಣ ಚೆನ್ನಾಗಿದೆ ಎಂದು ಸಾಮಾನ್ಯರು ಮಾತ್ರವಲ್ಲ ಸ್ಟಾರ್ ನಟಿಯರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಲೀಲಾ ಕೂಡ ಡಾಕ್ಟರ್ ಆಗಬೇಕು ಅನ್ನೋದು ಅವರ ಫ್ಯಾಮಿಲಿ ಕನಸು. ಸಿನಿಮಾ ಪ್ಯಾಶನ್ ಆಗಿರುವ ಕಾರಣ ಎರಡನ್ನೂ ಸಮವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾ ಆಯ್ಕೆ ಮಾಡುವುದರಿಂದ ಹಿಡಿದು ಪ್ರತಿಯೊಂದನ್ನು ಲೀಲಾ ತಾಯಿ ಸ್ವರ್ಣಲತಾ ಆಯ್ಕೆ ಮಾಡುವುದು. ಲೀಲಾ ಜೊತೆ ಏನೇ ಮಾತನಾಡಬೇಕಿದ್ದರೂ ತಾಯಿ ಮೂಲಕವೇ ನಡೆಯಬೇಕು.
 
ಇತ್ತೀಚಿಗೆ ಸ್ವರ್ಣಲತಾ ಕೂಡ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈಗ ಲೀಲಾ ಬಗ್ಗೆನೂ ಚರ್ಚೆ ಶುರುವಾಗಿದೆ, ಇದಕ್ಕೆ ಕಾರಣವೇ ಹೋಟೆಲ್ ಬೆಲೆ. ಟಾಲಿವುಡ್‌ ಮತ್ತು ಕನ್ನಡ ವೆಬ್‌ ಸೈಟ್‌ವೊಂದು ಮಾಡಿರುವ ವರದಿ ಪ್ರಕಾರ ಲೀಲಾ ಮಾಡುತ್ತಿರುವ ತಪ್ಪು ಮತ್ತು ನಿರ್ಮಾಪಕರು ದೃಷ್ಟಿಯಲ್ಲಿ ನಷ್ಟ ಎಷ್ಟಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಹೈದರಾಬಾದ್‌ನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಉಳಿದುಕೊಳ್ಳಲು 7 ಸ್ಟಾರ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 7 ಸ್ಟಾರ್ ಹೋಟೆಲ್‌ನ ರೂಮ್‌ ಬೆಲೆ ದಿನಕ್ಕೆ 22 ಸಾವಿರವಂತೆ. ಟ್ಯಾಕ್ಸ್‌ ಎಲ್ಲವೂ ಸೇರಿದರೆ 30 ದಿನಕ್ಕೆ 6 ಲಕ್ಷಕ್ಕೂ ಹೆಚ್ಚು ಹಣವಾಗುತ್ತದೆ. ಈ ಸಂಪೂರ್ಣ ಚರ್ಚನ್ನು ನಿರ್ಮಾಪಕರೇ ಮಾಡಬೇಕಿರುವ ಕಷ್ಟ ಆಗುತ್ತದೆ ಎನ್ನಲಾಗಿದೆ. ಈಗಷ್ಟೆ ಬೆಳೆಯುತ್ತಿರುವ ನಟಿ ನಿರ್ಮಾಣ ಸಂಸ್ಥೆಗೆ ಇಷ್ಟೊಂದು ನಷ್ಟ ಮಾಡಿದರೆ ಭವಿಷ್ಯ ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಲಿ ಖಮೇನಿ ಸಾವಿನ ಬಳಿಕ ಕೋಮಾಕ್ಕೆ ಜಾರಿದ ಪತ್ನಿ ಕೂಡಾ ಇನ್ನಿಲ್ಲ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ: ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ

ಚೂರಿ ಇರಿತಕ್ಕೊಳಗಾದ ರೀತಿಯಲ್ಲಿ ಶವಪತ್ತೆ ಪ್ರಕರಣ, ಮೂವರು ಅರೆಸ್ಟ್‌

ಗಲ್ಫ್ ಆಫ್ ಓಮನ್‌ನಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ, ಭಾರತೀಯ ಪ್ರಜೆ ಸಾವು

ರೇಷ್ಮೆ ಕಾರ್ಖಾನೆ ಮುಚ್ಚುವ ಬಿಜೆಪಿ ಆರೋಪ ಬಗ್ಗೆ ಎಚ್‌ಸಿ ಮಹದೇವಪ್ಪ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments