ಕೇರಳ, ಕೊಡಗು ನೆರೆಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಿದ ಆರ್.ಎಸ್.ಎಸ್

Webdunia
ಮಂಗಳವಾರ, 21 ಆಗಸ್ಟ್ 2018 (18:02 IST)
ಕುಂದಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕೇರಳ, ಕೊಡಗು ನೆರಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಕಾರ್ಯ ನಡೆಯಿತು.

ಆರ್.ಎಸ್.ಎಸ್. ಸ್ವಯಂಸೇವಕರು ಪೇಟೆಯ ಪ್ರತಿ ಅಂಗಡಿಗಳಿಗೆ ತೆರಳಿ ಅವರು ನೀಡಿದ ಧನಸಹಾಯ ಹಾಗೂ ಬಟ್ಟೆ, ದಿನೋಪಯೋಗಿ ವಸ್ತುಗಳನ್ನು ಸಂಗ್ರಹಿಸಿದರು. ಅಕ್ಕಿ, ಹೊಸಬಟ್ಟೆ, ನೀರಿನ ಬಾಟಲಿಗಳು, ದವಸ ಧಾನ್ಯ  ಮೊದಲಾದವುಗಳನ್ನು ಜನರು ಈ ವೇಳೆ ನೀಡಿದ್ದು ಕುಂದಾಪುರದಿಂದ ಉಡುಪಿ ಮೂಲಕ ಮಂಗಳೂರು ವಿಭಾಗಕ್ಕೆ ಕಳುಹಿಸಿ ಕೊಡಗು ಹಾಗೂ ಕೇರಳಕ್ಕೆ ರವಾನಿಸಲಾಗುತ್ತದೆ.

ಈ ಸಂದರ್ಭ ಆರ್.ಎಸ್.ಎಸ್. ತಾಲೂಕು ಸಹಕಾರ್ಯವಾಹ ವಿಕ್ರಮ್ ಕುಂದಾಪುರ, ನಗರ ವ್ಯವಸ್ಥಾ ಪ್ರಮುಖ್ ಅರುಣ್ ಖಾರ್ವಿ, ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ಮಹೇಶ್ ಕುಮಾರ್ ಪೂಜಾರಿ ಹಳೆಅಳಿವೆ, ಹಿಂಜಾವೇ ನಗರ ಸಂಚಾಲಕ ಅನಿಲ್, ಸುಶಾಂತ್ ಕುಂದಾಪುರ, ಭಾರತೀಯ ಮಜ್ದೂರ್ ಸಂಘದ ಸುರೇಶ್ ಕುಂದಾಪುರ ಮೊದಲಾದವರು ಇದ್ದರು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುಟುಂಬದ ಮಹಿಳೆಗೆ 2ಸಾವಿರ, ಪುರುಷರಿಗೆ ಉಚಿತ ಬಸ್ ಸೇವೆ: ಎಐಎಡಿಎಂಕೆ ಪ್ರಣಾಳಿಕೆ

ಬಿಯರ್ ಕುಡಿಯುತ್ತಾ ಬೈಕ್ ಚಾಲನೆ ಮಾಡಿದ ಮೂವರು ವೈದ್ಯರಿಗೆ ಬಿಗ್‌ಶಾಕ್‌

ಪಶ್ಚಿಮ ಏಷ್ಯಾ ಸಂಘರ್ಷ: ಟ್ರಂಪ್ ಜತೆ ಮಹತ್ವದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ

ಕೊನೆಯಾಯಿತು 13ವರ್ಷಗಳ ನೋವು: ದಯಾಮರಣ ಪಡೆದ ಹರೀಶ್ ರಾಣಾ ಇನ್ನಿಲ್ಲ

ರಾಜ್ಯ ಹವಾಮಾನದಲ್ಲಿ ಭಾರೀ ಬದಲಾವಣೆ, ಬೆಂಗಳೂರಿನಲ್ಲಿ ಮಳೆಯಾಗುತ್ತಾ

ಮುಂದಿನ ಸುದ್ದಿ
Show comments