Webdunia - Bharat's app for daily news and videos

Install App

ಒಂದೇ ವಾರದಲ್ಲಿ 5 ಭಾರಿ ಹುಡುಕಿ ಕಚ್ಚಿದ ಅದೇ ಹಾವು ; ಹಾವಿನ ದ್ವೇಷ

Webdunia
ಶುಕ್ರವಾರ, 16 ಸೆಪ್ಟಂಬರ್ 2022 (16:28 IST)

ಯಾವ ಕಾರಣಕ್ಕಾಗಿ ದ್ವೇಷ ಸಾಧಿಸುತ್ತಿದೆ ಎಂಬುದು ಮಾತ್ರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ‌ಆಗ್ರಾ ಜಿಲ್ಲೆಯಲ್ಲಿರುವ 20 ವರ್ಷದ ಯುವಕ ರಜತ್​​ ಚಹರ್​ಗೆ ಕಳೆದ 10 ದಿನಗಳ ಅಂತರದಲ್ಲಿ ಐದಕ್ಕೂ ಹೆಚ್ಚು ಸಲ ಕಚ್ಚಿ ಗಾಯಗೊಳಿಸಿದೆ. ಅದೃಷ್ಟವಶಾತ್​​​ ಸಕಾಲದಲ್ಲಿ ಚಿಕಿತ್ಸೆ ಪಡೆದು ಆತ ಬದುಕುಳಿದಿದ್ದಾನೆ.

ರಜತ್​​ ಉತ್ತರ ಪ್ರದೇಶದ ಮಾಲ್ಪುರದ ಮಂಕೆಡಾ ಎಂಬಲ್ಲಿ ವಾಸವಾಗಿದ್ದಾನೆ. ಪದವಿ ವ್ಯಾಸಂಗ ಮಾಡುತ್ತಿದ್ದು ಮೊದಲ ಬಾರಿಗೆ ಸೆಪ್ಟೆಂಬರ್​​ 6 ರಂದು ರಾತ್ರಿ 10 ಗಂಟೆಗೆ ಮನೆಯ ಹೊರಗಡೆ ಹಾವು ಕಚ್ಚಿದೆ. ತಕ್ಷಣವೇ ವೈದ್ಯಕೀಯ ಕಾಲೇಜ್​​​ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್​ 8ರಂದು ಸಂಜೆಯ ವೇಳೆ ಮನೆ ಹೊರಗಡೆಯ ಶೌಚಾಲಯಕ್ಕೆ ಬಂದಾಗ ಮತ್ತೊಮ್ಮೆ ಹಾವು ಕಚ್ಚಿದೆ. ಈ ಸಂದರ್ಭಲ್ಲೂ ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ. ಇದಾದ ಬಳಿಕ ಸೆಪ್ಟೆಂಬರ್​ 11,13 ಹಾಗೂ 14ರಂದು ಕ್ರಮವಾಗಿ ಹಾವು ಕಚ್ಚಿದೆ. ಯುವಕನಿಗೆ ಪದೇ ಪದೇ ಹಾವು ಕಚ್ಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಎಲ್ಲೆಡೆ ಹರಡಿ ಆತನನ್ನು ನೋಡಲು ಜನ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments