Select Your Language

Notifications

webdunia
webdunia
webdunia
webdunia

ಸ್ಮೃತಿ ಇರಾನಿ ಆರೋಗ್ಯದಲ್ಲಿ ಏರುಪೇರು: ಚುನಾವಣೆ ಪ್ರಚಾರ ಅರ್ಧಕ್ಕೆ ಮೊಟಕು

ಸ್ಮೃತಿ ಇರಾನಿ ಆರೋಗ್ಯದಲ್ಲಿ ಏರುಪೇರು: ಚುನಾವಣೆ ಪ್ರಚಾರ ಅರ್ಧಕ್ಕೆ ಮೊಟಕು
ಬೀದರ್ , ಬುಧವಾರ, 9 ಮೇ 2018 (13:02 IST)
ಚುನಾವಣೆ ಪ್ರಚಾರಕ್ಕೆಂದು ಬಂದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಆರೋಗ್ಯದಲ್ಲಿ ಏಕಾ ಏಕಿ ಏರುಪೇರಾದಂಥ ಘಟನೆ ನಡೆದಿದೆ. 

ಬೀದರ್ ಜಿಲ್ಲೆಯ ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ಪರ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದ ಮೂಲಕವಾಗಿ ಬೀದರ್ ವಿಮಾನ ತರಬೇತಿ ಕೇಂದ್ರಕ್ಕೆ ಆಗಮಿಸಿ ಅಲ್ಲಿಂದ ಹೆಲಿಕ್ಯಾಪ್ಟರ್ ಮುಖಾಂತರ ಔರಾದ್ ಹೆಲಿಪ್ಯಾಡನಲ್ಲಿ ಇಳಿಯುತ್ತಿದ್ದಂತೆ ಸಚಿವೆ ಇರಾನಿ ಅವರ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. 
 
ಹೀಗಾಗಿ ಹೆಲಿಪ್ಯಾಡ್ ನಿಂದಲೆ ಮತ್ತೆ ಅದೇ ಹೆಲಿಕ್ಯಾಪ್ಟರ್ ಮೂಲಕ ವಾಪಸ್ಸು ಬೀದರ್ ಎರ್ ಬೇಸ್ ಗೆ ಬಂದು ದೆಹಲಿ ಗೆ ತೆರಳಿದ್ರು. 
 
ಆದ್ರೆ ಸಾವಿರಾರು ಜನ ಸ್ಮೃತಿ ಈರಾನಿ ಅವರ ಭಾಷಣ ಕೇಳಲಿಕ್ಕೆ ಬಂದಿದ್ದರು. ಜನರನ್ನ ಸಂಸದ ಭಗವಂತ ಖೂಬಾ ಸಮಾಧಾನಪಡಿಸಿದ್ದಾರೆ. ಸಧ್ಯ ಸಚಿವೆ ಸ್ಮೃತಿ ಈರಾನಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಮತದಾರರಲ್ಲಿ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನ ನಾಮ್ ದಾರ್ ಗಳು ಚಿನ್ನದ ಚಮಚದೊಂದಿಗೆ ಹುಟ್ಟಿದ್ದಾರೆ: ಪ್ರಧಾನಿ ಮೋದಿ ಲೇವಡಿ