Select Your Language

Notifications

webdunia
webdunia
webdunia
webdunia

ಗೌರಿ ಹತ್ಯೆ ಆರೋಪಿ ಪರಶುರಾಮ್ ಬಳಿ ಕೃತ್ಯದ ಮರುಸೃಷ್ಟಿ ಮಾಡಿಸಿ ಎಸ್ಐಟಿ

ಗೌರಿ ಹತ್ಯೆ ಆರೋಪಿ ಪರಶುರಾಮ್ ಬಳಿ ಕೃತ್ಯದ ಮರುಸೃಷ್ಟಿ ಮಾಡಿಸಿ ಎಸ್ಐಟಿ
ಬೆಂಗಳೂರು , ಭಾನುವಾರ, 24 ಜೂನ್ 2018 (12:07 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗೌರಿ ಮನೆ ಬಳಿ ಕರೆದೊಯ್ದ ಎಸ್ಐಟಿ ತಂಡ ಪ್ರಕರಣದ ಮರುಸೃಷ್ಟಿ ಮಾಡಿಸಿದೆ.

ಈ ವೇಳೆ ಘಟನೆ ನಡೆದಿದ್ದು ಹೇಗೆ ಎಂಬುದನ್ನು ಆರೋಪಿ ಮಾಡಿ ತೋರಿಸಿದ್ದಾನೆ ಎನ್ನಲಾಗಿದೆ. ಗೌರಿ ಕಾರಿನಿಂದ 5 ರಿಂದ 6 ಅಡಿ ದೂರದಲ್ಲಿ ಕಾರು ನಿಲ್ಲಿಸಿ 2 ಅಡಿ ದೂರದಿಂದ ಗುಂಡು ಹಾರಿಸಿರುವುದಾಗಿ ಆರೋಪಿ ವಿವರಿಸಿದ್ದಾನೆ. ಗುಂಡು ಹಾರಿಸಿದ ಮೇಲೆ ಬೈಕ್ ಹತ್ತಿ ಹೊರಟ ಮೇಲೆ ಏನು ನಡೆಯಿತು ಎಂಬುದು ತನಗೆ ಗೊತ್ತಾಗಲಿಲ್ಲ ಎಂದು ಆತ ಹೇಳಿದ್ದಾನೆ.

ಈ ನಡುವೆ ಇದೇ ಆರೋಪಿಗಳು  ಇನ್ನೊಬ್ಬ ವಿಚಾರವಾದಿ ಪ್ರೊ. ಕೆಎಸ್ ಭಗವಾನ್ ಹತ್ಯೆಗೂ ಸಂಚು ರೂಪಿಸಿತ್ತು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಈಗಾಗಲೇ ಭಗವಾನ್ ಹತ್ಯೆಗೆ ಸುಫಾರಿ ಕೊಡಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ