Select Your Language

Notifications

webdunia
webdunia
webdunia
webdunia

ಗೌರಿ ಹತ್ಯೆ ಕೇಸ್: ಅಳ್ತಿದ್ದ ಅಂತ ಪರಶುರಾಮ್ ಪೋಷಕರನ್ನು ಕರೆಸಿದೆವು ಎಂದ ಎಸ್ ಐಟಿ

ಗೌರಿ  ಹತ್ಯೆ ಕೇಸ್: ಅಳ್ತಿದ್ದ ಅಂತ ಪರಶುರಾಮ್ ಪೋಷಕರನ್ನು ಕರೆಸಿದೆವು ಎಂದ ಎಸ್ ಐಟಿ
ಬೆಂಗಳೂರು , ಶನಿವಾರ, 16 ಜೂನ್ 2018 (11:14 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರಶುರಾಮ್ ವಾಗ್ಮೋರೆ ಪೋಷಕರನ್ನು ಬೆಂಗಳೂರಿಗೆ ಕರೆಸಿದ ಬಗ್ಗೆ ಎಸ್ಐಟಿ ಸ್ಪಷ್ಟನೆ ನೀಡಿದೆ.

ಪರಶುರಾಮ್ ಸ್ನೇಹಿತ ರಾಕೇಶ್ ಮಠ ವಿಚಾರಣೆಗೆ ಆಗಮಿಸುವಾಗ ಜತೆಗೆ ತಂದೆ ಅಶೋಕ್ ವಾಗ್ಮೋರೆ ಕೂಡಾ ಬಂದಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಐಟಿ ಪೋಷಕರನ್ನು ವಿಚಾರಣೆಗೊಳಪಡಿಸುವ ಇರಾದೆ ಇಲ್ಲ ಎಂದಿದೆ.

‘ವಿಚಾರಣೆ ಸಂದರ್ಭ ಪರಶುರಾಮ್ ಪೋಷಕರನ್ನು ನೋಡಬೇಕೆಂದು ಅಳುತ್ತಿದ್ದ. ಹಾಗಾಗಿ ಫೋನ್ ಮಾಡಲು ಅವಕಾಶ ಕೊಟ್ಟೆವು. ಫೋನ್ ನಲ್ಲೂ ಅಳುತ್ತಿದ್ದ. ಅದಕ್ಕೆ ಪೋಷಕರಿಗೆ ಕರೆ ಕಳುಹಿಸಿದ್ದೇವೆ’ ಎಂದು ಎಸ್ಐಟಿ ಸ್ಪಷ್ಟನೆ ಕೊಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರದಿಂದ ಲಾರಿ ಮುಷ್ಕರ: ಅಗತ್ಯ ವಸ್ತುಗಳನ್ನು ಇಂದೇ ಖರೀದಿಸಿದರೆ ಒಳಿತು!