Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಪರಶುರಾಮ್ ತಂದೆ, ಸ್ನೇಹಿತರಿಗೆ ಎಸ್ಐಟಿ ಬುಲಾವ್

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಪರಶುರಾಮ್ ತಂದೆ, ಸ್ನೇಹಿತರಿಗೆ ಎಸ್ಐಟಿ ಬುಲಾವ್
ಬೆಂಗಳೂರು , ಶನಿವಾರ, 16 ಜೂನ್ 2018 (09:38 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಆರೋಪಿ ಪರಶುರಾಮ್ ವಾಗ್ಮೋರೆ ಸ್ನೇಹಿತ ರಾಕೇಶ್ ಮತ್ತು ತಂದೆ ಅಶೋಕ್ ವಾಗ್ಮೋರೆಗೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಇಬ್ಬರೂ ಬೆಂಗಳೂರಿಗೆ ವಿಚಾರಣೆಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಮಾತನಾಡಿರುವ ಪರಶುರಾಮ್ ತಂದೆ ಅಶೋಕ್ ವಾಗ್ಮೋರೆ ‘ನನ್ನ ಮಗ ನನ್ನ ಬಳಿ ಈ ವಿಚಾರ ಏನೂ ಹೇಳಿಲ್ಲ. ಆತ ಹತ್ಯೆ ಮಾಡಿದ್ದಾನೆಂದರೆ ನನಗೆ ನಂಬಿಕೆ ಬರುತ್ತಿಲ್ಲ’ ಎಂದಿದ್ದಾರೆ.

ಇನ್ನು ಶ್ರೀರಾಮ ಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್ ನಾವಿಬ್ಬರೂ ಸ್ನೇಹಿತರು. ಆದರೆ ಇದುವರೆಗೆ ಪರಶುರಾಮ್ ನನ್ನ ಬಳಿ ಈ ಕೃತ್ಯದ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಎಸ್ಐಟಿ ತನಿಖೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಮಾಡಿಯಲ್ಲಿ ಅಂತೂ ಲಘು ವಾಹನ ಸಂಚಾರಕ್ಕೆ ಮುಕ್ತ