Select Your Language

Notifications

webdunia
webdunia
webdunia
webdunia

ಚಾರ್ಮಾಡಿಯಲ್ಲಿ ಅಂತೂ ಲಘು ವಾಹನ ಸಂಚಾರಕ್ಕೆ ಮುಕ್ತ

ಚಾರ್ಮಾಡಿಯಲ್ಲಿ ಅಂತೂ ಲಘು ವಾಹನ ಸಂಚಾರಕ್ಕೆ ಮುಕ್ತ
ಬೆಂಗಳೂರು , ಶನಿವಾರ, 16 ಜೂನ್ 2018 (09:24 IST)
ಬೆಂಗಳೂರು: ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದೀಗ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಗುಡ್ಡ, ಮರ ಬಿದ್ದು ರಸ್ತೆ ಬ್ಲಾಕ್ ಆಗಿತ್ತು. ಇದರಿಂದಾಗಿ ವಾಹನ ಸಂಚಾರ ಬಂದ್ ಆಗಿತ್ತು. ಇದೀಗ ರಸ್ತೆಗೆ ಬಿದ್ದ ಮಣ್ಣು ಸರಿಸುವ ಕೆಲಸ ನಡೆದಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬಿಡುವಿಲ್ಲದೇ ಎರಡು ದಿನ ಸುರಿದ ಮಳೆ ನಿನ್ನೆ ಕೊಂಚ ಬಿಡುವು ತೋರಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಈಗ ಲಘು ವಾಹನಕ್ಕೆ ಮಾತ್ರ ಸಂಚಾರ ಮಾಡಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಬಸ್ ಮುಂತಾದ ಘನ ವಾಹನಗಳು ಬಳಸು ದಾರಿ ಮೂಲಕವೇ ಮಂಗಳೂರು ಕಡೆಗೆ ಸಂಚಾರ ನಡೆಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ ಮುಗಿವವರೆಗೆ ಯಾರೂ ನನ್ನ ಟಚ್ ಮಾಡಕ್ಕಾಗಲ್ಲ: ಸಿಎಂ ಕುಮಾರಸ್ವಾಮಿ