Select Your Language

Notifications

webdunia
webdunia
webdunia
webdunia

ಕಪ್ ಗೆದ್ದು ಅಭಿಮಾನಿಗಳ ಕಾಯುವಿಕೆ ಅಂತ್ಯ ಮಾಡಿ, RCBಗೆ ಶುಭ ಹಾರೈಸಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

Sampriya

ಬೆಂಗಳೂರು , ಮಂಗಳವಾರ, 3 ಜೂನ್ 2025 (17:07 IST)
ಬೆಂಗಳೂರು: ಇದುವರೆಗೂ ಐಪಿಎಲ್‌ ಟ್ರೋಪಿಯನ್ನು ಗೆಲ್ಲದ ಆರ್‌ಸಿಬಿ ಈ ಬಾರಿ  ಗೆದ್ದೆ ಗೆಲ್ಲುತ್ತಾರೆಂಬ ವಿಶ್ವಾಸ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಅವರು ವಿಡಿಯೋ ಫೋಸ್ಟ್‌ ಮಾಡಿ, ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಬಾರಿ ಐಪಿಎಲ್‌ ಕಪ್‌ ಗೆಲ್ಲುವ ಅರ್ಹತೆ ಮತ್ತು ತಾಕತ್ತು ಆರ್‌ಸಿಬಿಗಿದೆ. ಇಂದಿನ ಒಂದು ಪಂದ್ಯದ ಗೆಲುವು ಕೋಟ್ಯಂತರ ಅಭಿಮಾನಿಗಳ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಲಿದೆ ಎನ್ನುವುದು ನನ್ನ ಭಾವನೆ.


ಈ ಹಿಂದೆಯೂ ಆರ್‌ಸಿಬಿಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಬಲವನ್ನು ಸೂಚಿಸುತ್ತಿದ್ದಾರೆ. ಸ್ಟೇಡಿಯಂಗೆ ಬಂದು ಆರ್‌ಸಿಬಿಯ ಪಂದ್ಯಾಟವನ್ನು ವೀಕ್ಷಿಸಿದ್ದು ಉಂಟು. ಇದೀಗ ಆರ್‌ಸಿಬಿಯ ಗೆಲುವು ಕೋಟ್ಯಂತರ ಅಭಿಮಾನಿಗಳ 18ವರ್ಷಗಳ ಕಾಯುವಿಕೆಯನ್ನು ಅಂತ್ಯ ಮಾಡುತ್ತದೆ ಎಂದರು. 

ಇಂದು ಅಹಮಾದಾಬಾದ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ 2025ರ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ. ಚೊಂಚಲ ಬಾರಿಗೆ ಎರಡು ತಂಡಗಳು ಇಂದು ಎದುರು ಬದುರಾಗಲಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಾಕ್ ಸ್ವಾತಂತ್ರ್ಯವಿದೆ, ನೋವಿಸುವಷ್ಟರ ಮಟ್ಟಿಗಲ್ಲ: ಶರ್ಮಿಷ್ಟಾ ಪನೋಲಿಗೆ ಜಾಮೀನು ನೀಡಲು ಕೋರ್ಟ್‌ ನಿರಾಕರಣೆ