Select Your Language

Notifications

webdunia
webdunia
webdunia
webdunia

ವಾಕ್ ಸ್ವಾತಂತ್ರ್ಯವಿದೆ, ನೋವಿಸುವಷ್ಟರ ಮಟ್ಟಿಗಲ್ಲ: ಶರ್ಮಿಷ್ಟಾ ಪನೋಲಿಗೆ ಜಾಮೀನು ನೀಡಲು ಕೋರ್ಟ್‌ ನಿರಾಕರಣೆ

ಆಪರೇಷನ್ ಸಿಂಧೂರ್

Sampriya

ಕೋಲ್ಕತ್ತ , ಮಂಗಳವಾರ, 3 ಜೂನ್ 2025 (16:01 IST)
Photo Credit X
ಆಪರೇಷನ್ ಸಿಂಧೂರ್‌ ಬಗ್ಗೆ ಒಂದು ಸಮುದಾಯವನ್ನು ಗುರಿಯಾಗಿ ಮಾಡಿದ ವಿವಾದಾತ್ಮಕ ವಿಡಿಯೋ ಸಂಬಂಧ ಅರೆಸ್ಟ್ ಆಗಿರುವ  ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಶರ್ಮಿಷ್ಟಾ ಪನೋಲಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಮೂಲಕ ಶರ್ಮಿಷ್ಟಾಗೆ ಭಾರೀ ಹಿನ್ನಡೆಯಾಗಿದೆ. 

ಕಾನೂನಿನ ಪ್ರಕಾರ ವ್ಯಕ್ತಿಗಳು ಅಥವಾ ಸಮುದಾಯಗಳಿಗೆ ಅಪರಾಧವನ್ನು ಉಂಟುಮಾಡುವ ಮಟ್ಟಿಗೆ ವಾಕ್ ಸ್ವಾತಂತ್ರ್ಯದ ಗಡಿಗಳನ್ನು ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ  ಉಲ್ಲೇಖಿಸಿದೆ. 

ಪ್ರಕರಣದ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಪಾರ್ಥ ಸಾರಥಿ ಚಟರ್ಜಿ ಅವರು ಮಧ್ಯಂತರ ಜಾಮೀನು ನಿರಾಕರಿಸಿ, "ನೋಡಿ, ನಮಗೆ ವಾಕ್ ಸ್ವಾತಂತ್ರ್ಯವಿದೆ, ಆದರೆ ನೀವು ಇತರರನ್ನು ನೋಯಿಸುವ ಮಟ್ಟಿಗೆ ಆ ಸ್ವಾಂತ್ರವಿಲ್ಲ ಎಂದು ಶರ್ಮಿಷ್ಟಾರನ್ನು ತರಾಟೆಗೆ ತೆಗೆದುಕೊಂಡಿದೆ. 

ನಮ್ಮ ದೇಶವು ವೈವಿಧ್ಯಮಯವಾಗಿದೆ, ವಿವಿಧ ಜಾತಿಗಳು, ಧರ್ಮಗಳು ಮತ್ತು ಧರ್ಮಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ನಾವು ಹೇಳಿಕೆ ಕೊಡುವ ಮುನ್ನಾ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ.

ಪುಣೆಯ 22 ವರ್ಷದ ಕಾನೂನು ವಿದ್ಯಾರ್ಥಿ ಪನೋಲಿಯನ್ನು ಕಳೆದ ಶುಕ್ರವಾರ ಗುರುಗ್ರಾಮ್‌ನಲ್ಲಿ ಕೋಲ್ಕತ್ತಾ ಪೊಲೀಸರು ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ವೀಡಿಯೊಗೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಂಧಿಸಿದ್ದರು.

ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ವೀಡಿಯೊ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿದೆ ಎಂದು ವರದಿಯಾಗಿದೆ, ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳಿಗೆ ಹೀಗೇ ತೊಂದರೆ ಕೊಡುತ್ತಿದ್ದರೆ ಬಿಜೆಪಿ ಕೈಕಟ್ಟಿ ಕೂರಲ್ಲ: ಬಿವೈ ವಿಜಯೇಂದ್ರ