ಹೈದರಾಬಾದ್: ರಾಹುಲ್ ಗಾಂಧಿ ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಪಿಒಕೆ ನಮ್ಮದಾಗಿಸಿಕೊಳ್ತಿದ್ರು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ್ದಾರೆ. ಈಗೇನಾದ್ರೂ ಮೋದಿ ಬದಲು ರಾಹುಲ್ ಗಾಂಧಿ ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನ ಎರಡು ಭಾಗ ಮಾಡಿ ಪಿಒಕೆಯನ್ನು ವಶಪಡಿಸಿಕೊಳ್ತಿದ್ರು ಎಂದು ಹಾಡಿ ಹೊಗಳಿದ್ದಾರೆ.
ದೇಶಕ್ಕೆ ರಾಹುಲ್ ಗಾಂಧಿಯ ನಾಯಕತ್ವ ಅಗತ್ಯವಿತ್ತು. ಅವರು ಇಂದಿರಾ ಗಾಂಧಿ ಸ್ಪೂರ್ತಿಯಿಂದ ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಪಿಒಕೆ ವಶಪಡಿಸಿಕೊಳ್ತಿದ್ರು ಎಂದಿದ್ದಾರೆ. ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ನ್ನು ಅರ್ಧಕ್ಕೇ ನಿಲ್ಲಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರೇವಂತ್ ರೆಡ್ಡಿ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಮೋದಿ ಎಲ್ಲಾ ಪಕ್ಷಗಳ ಅಭಿಪ್ರಾಯ ಕೇಳಬಹುದಿತ್ತು ಎಂದಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ನಮ್ಮ ಎಷ್ಟು ರಾಫೆಲ್ ವಿಮಾನಗಳನ್ನು ಹೊಡೆದುರಳಿಸಿದೆ ಎಂದು ಮೋದಿ ದೇಶಕ್ಕೇ ಸತ್ಯ ಹೇಳಲಿ ಎಂದಿದ್ದಾರೆ.