Select Your Language

Notifications

webdunia
webdunia
webdunia
webdunia

ಮಳೆ ಸಾಕಾ... ಬೇಕಾ: ಕಾಲೆಳೆದ ಬಿಜೆಪಿಗೆ ಟಕ್ಕರ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಮಳೆ ದಾಖಲೆಗಳು

Sampriya

ಬೆಂಗಳೂರು , ಶನಿವಾರ, 31 ಮೇ 2025 (15:53 IST)
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ರಾಜ್ಯದಲ್ಲಿ ಮಳೆ ಕಣ್ಮರೆಯಾಗಿ ಬರಗಾಲ ಆವರಿಸುತ್ತದೆ ಎಂದೆಲ್ಲಾ ಕಟ್ಟುಕತೆ ಕಟ್ಟಿ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿಬಿಡುತ್ತಿದ್ದ ಬಿಜೆಪಿ ನಾಯಕರು ಇಂದು ದಿನವಿಡೀ ಕೊಡೆ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. .

ಸಾಮಾನ್ಯವಾಗಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಜೂನ್ ತಿಂಗಳಿನಲ್ಲಿ 100 ಅಡಿ ತಲುಪುತ್ತಿತ್ತು, ಆದರೆ ಈ ಬಾರಿ ಮೇ ತಿಂಗಳಿನಲ್ಲಿಯೇ 100 ಅಡಿ ತಲುಪುವ ಮೂಲಕ ಕಳೆದ 35 ವರ್ಷಗಳಲ್ಲಿಯೇ ಮೊದಲ ಬಾರಿ ದಾಖಲೆಯ ಸಂಗ್ರಹವಾಗಿದೆ.

ಈ ವಿಷಯವನ್ನು ಮುಂದಿಟ್ಟು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ ಅವರು,
ನುಡಿದಂತೆ ನಡೆಯುವ ಗ್ಯಾರಂಟಿ ಸರ್ಕಾರದ ಜನಪರ ಆಡಳಿತಕ್ಕೆ ವರುಣನು ಕೈ ಜೋಡಿಸುವ ಮೂಲಕ ಆಡಿಕೊಳ್ಳುತ್ತಿದ್ದವರಿಗೆ ಮತ್ತಷ್ಟು ಸಂಕಟದ ಪರಿಸ್ಥಿತಿ ಎದುರಾಗಿದೆ.

ಅಲ್ಲದೇ ನೆರೆ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Kedarnath: 30 ದಿನಗಳಲ್ಲಿ 6.50ಕ್ಕೂ ಅಧಿಕ ಭಕ್ತಾಧಿಗಳ ಭೇಟಿ