Select Your Language

Notifications

webdunia
webdunia
webdunia
webdunia

ಸುಧಾಕರ್ನನ್ನು ಸೋಲಿಸುವುದಾಗಿ ಸಿದ್ದರಾಮಯ್ಯ ಶಪಥ

ಸುಧಾಕರ್ನನ್ನು ಸೋಲಿಸುವುದಾಗಿ ಸಿದ್ದರಾಮಯ್ಯ ಶಪಥ
ಬೆಂಗಳೂರು , ಬುಧವಾರ, 25 ಜನವರಿ 2023 (14:20 IST)
ಬೆಂಗಳೂರು : ಒಂದು ಕಾಲದ ಕುಚುಕು ಶಿಷ್ಯನ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ನಿಗಿ ನಿಗಿ ಕೆಂಡಕಾರಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಸೋಲಿಸುವ ಶಪಥ ಮಾಡಿರುವ ಸಿದ್ದರಾಮಯ್ಯ, ಸುಧಾಕರ್ನನ್ನು ಸೋಲಿಸ್ತೀವಿ, ಒಳ್ಳೆ ಅಭ್ಯರ್ಥಿ ಹಾಕ್ತೀವಿ.

ನಮ್ಮ ಪಕ್ಷ ತೀರ್ಮಾನ ಮಾಡುತ್ತೆ, ಅವರನ್ನು ಸೋಲಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಅವರು ಸುಧಾಕರ್ ಹತ್ರ ಮಾತಾಡಿಸ್ತಿದ್ದಾರೆ. ಇವನು ಮೂರ್ಖನಂಗೆ ಬಲಿಯಾಗಿದ್ದಾನೆ.

ಇವನು ಮಹಾ ನಾಯಕ ಆಗಿದ್ದೀನಿ ಅಂತಾ ಅಂದ್ಕೊಂಡು ಬಿಟ್ಟಿದ್ದಾನೆ ಅಂತಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ : ಶಿವಕುಮಾರ್