Webdunia - Bharat's app for daily news and videos

Install App

ಸಿದ್ದರಾಮಯ್ಯ ಅನಾಗರಿಕ; ಉಡಾಫೆ ಮಾತನಾಡೋ ವ್ಯಕ್ತಿ

Webdunia
ಬುಧವಾರ, 8 ಮೇ 2019 (21:24 IST)
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅನಾಗರಿಕ. ಉಡಾಫೆ ಮಾತನಾಡೋ ಮನುಷ್ಯ. ಹೀಗಂತ ಬಿಜೆಪಿ ಮುಖಂಡ ದೂರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಏಕ ವಚನದಲ್ಲಿ ನಿಂದಿಸಿರುವುದನ್ನ ಖಂಡಿಸಿರುವ  ಚಾಮರಾಜನಗರ ಲೋಕಸಭೆಯ ಬಿಜೆಪಿ ಅಭ್ಯರ್ಥಿ  ವಿ. ಶ್ರೀನಿವಾಸಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಅನಾಗರೀಕ ಎಂದಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಜಿ ಸಚಿವ ಶ್ರೀನಿವಾಸಪ್ರಸಾದ್ , ಸಿದ್ದರಾಮಯ್ಯ ಗೆ ಸಂಸ್ಕೃತಿ ಇಲ್ಲ, ನಾಗರೀಕತೆ ಇಲ್ಲ, ಆತ ಒಬ್ಬ ಉಡಾಫೆಯಾಗಿ ಮಾತನಾಡುವ ವ್ಯಕ್ತಿ‌. ದೇಶದ ಪ್ರಧಾನಿ  ಬಗ್ಗೆ ಏಕವಚನ ಬಳಸಿರುವುದು ಸರಿಯಲ್ಲ ಎಂದರು.

ಚಾಮುಂಡೇಶ್ವರಿಯಲ್ಲಿ  36 ಸಾವಿರ ಓಟುಗಳಲ್ಲಿ ಸೋತರೂ ಅವರಿಗೆ ನಾಚಿಕೆಯಾಗಿಲ್ಲ. ನಾನೇ ನಾನೇ ಎಂದು ಮೆರೆದ್ರು,  120 ರಿಂದ 78 ಕ್ಕೆ ತಮ್ಮ ಸ್ಥಾನ ಇಳಿದರೂ ಅವರಿಗೆ ನಾಚಿಕೆಯಾಗಲ್ವ ಎಂದರು. ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಗೊಂದಲದ ಗೂಡಾಗಿದೆ ಎಂದು  ಪ್ರಸಾದ್ ಹೇಳಿದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments