Select Your Language

Notifications

webdunia
webdunia
webdunia
webdunia

ಸಿಎಂ ಆಗೋ ಬಗ್ಗೆ ಈಗಲೆ ಹೇಳೊಲ್ಲ ಎಂದ ಸಚಿವ

ಸಿಎಂ ಆಗೋ ಬಗ್ಗೆ ಈಗಲೆ ಹೇಳೊಲ್ಲ ಎಂದ ಸಚಿವ
ಹುಬ್ಬಳ್ಳಿ , ಬುಧವಾರ, 8 ಮೇ 2019 (20:25 IST)
ಸಿದ್ದರಾಮಯ್ಯ ನಮ್ಮ ನಾಯಕರೇ ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಸಿಎಂ ಆಗೋ ಬಗ್ಗೆ ಇವಾಗ ಹೇಳೋಕ್ಕಾಗಲ್ಲ ಅಂತ ಸಚಿವ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ನಮ್ಮ‌ ನಾಯಕರು ಕೂಡಾ ಸಿದ್ದರಾಮಯ್ಯನವರೇ,
ಆದ್ರೆ ಇವಾಗ ಸಿಎಂ‌ ಹೆಚ್ ಡಿಕೆ ಇದ್ದಾರೆ. ನಾಯಕರು ಬೇರೆ ಸಿಎಂ ವಿಚಾರ ಬೇರೆ ಎಂದರು.

ಕುಂದಗೋಳ ಬೈ ಏಲೆಕ್ಷನ್ ಗಾಗಿ ನಾವು ತಯಾರಿಯನ್ನ ಮಾಡುತ್ತಿದ್ದೇವೆ. ಬೂತ್ ಮಟ್ಟದ ಉಸ್ತುವಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರು ಯಾವ ರೀತಿ ಕೆಲಸ ಮಾಡಬೇಕು ಎನ್ನೋದನ್ನ ಚರ್ಚೆ ಮಾಡಿದ್ದೇವೆ.

ಸರ್ಕಾರ ಸುಭದ್ರವಾಗಿದೆ, ಆದರು ಕೂಡಾ ಬೈ ಏಲೆಕ್ಷನ್ ಗೆಲ್ಲೋದು ನಮ್ಮ ಕರ್ತವ್ಯ ಎಂದರು. ನಾವು ಚಿಂಚೋಳಿ, ಕುಂದಗೋಳ  ಉಪಚುನಾವಣೆ ಗೆಲ್ಲುತ್ತೇವೆ. ಮೇ 17 ರವರೆಗೂ ಕುಂದಗೋಳದಲ್ಲೆ ಇದ್ದು ಪ್ರಚಾರ ನಡೆಸೋದಾಗಿ ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಜೇಡಿ ಮಣ್ಣಿನ ಮಳೆರಾಯನಿಗೆ ಮಾಡಿದ್ದೇನು?