Webdunia - Bharat's app for daily news and videos

Install App

ಕೂಲಿಯನ್ನೇ ಕೊಂದ ಅಂಗಡಿ ಮಾಲೀಕ: ಕಾರಣ?

Webdunia
ಶನಿವಾರ, 4 ಮೇ 2019 (18:18 IST)
ಅಂಗಡಿಯೊಂದರ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಹಮಾಲಿ ಮಾಡಿಕೊಂಡಿದ್ದ ವ್ಯಕ್ತಿಯನ್ನು ಕೊಲೆಮಾಡಿದ್ದಾನೆ.

ಕೃತ್ಯ ಖಂಡಿಸಿ ಹಮಾಲರಿಂದ ಪ್ರತಿಭಟನೆ ನಡೆದಿದ್ದು, ದಾವಣಗೆರೆ ಈರುಳ್ಳಿ‌ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮಾಲೀಕನ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಂಗಡಿ ಗಾಜು ಹಾಗೂ  ಉಪಕರಣಗಳು ಧ್ವಂಸಗೊಂಡಿವೆ.

ಹಮಾಲಿ ಬಸಾಪುರ ವೀರೇಶ (35) ಎಂಬಾತ ಕೊಲೆಗೀಡಾದವನು.

ಏ. 26ರಂದು ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ನಡೆದ ಕೊಲೆ ಪ್ರಕರಣದ ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲಾಗಿದೆ.

ಈರುಳ್ಳಿ ದಲ್ಲಾಳಿ ಅಂಗಡಿ ಮಾಲೀಕ ಮುತ್ಯುಂಜಯ ಜ್ಯೋತಿಬಣದ  ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ವೀರೇಶನನ್ನು ಹೊಡೆದು ಕೊಲೆ ಮಾಡಿ ಕಾರ್ ನಲ್ಲಿ ಹಾಕಿ ಸುಟ್ಟಿದ್ದಾನೆ ಆರೋಪಿ ಮೃತ್ಯುಂಜಯ ಎನ್ನಲಾಗಿದೆ. ರಾಣೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ವಶದಲ್ಲಿ ಆರೋಪಿ ಮೃತ್ಯುಂಜಯ ಇದ್ದಾನೆ. ಪ್ರಕರಣ ಖಂಡಿಸಿ ದಾವಣಗೆರೆಯಲ್ಲಿ ಹಮಾಲರಿಂದ ಪ್ರತಿಭಟನೆ ನಡೆಯಿತು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments