Select Your Language

Notifications

webdunia
webdunia
webdunia
webdunia

ಕಳ್ಳತನ ಮಾಡಿದ್ದನೆಂದು ಬಾಲಕನಿಗೆ ಇಂತಹ ಗತಿ ತಂದ ಕಿರಾಣಿ ಅಂಗಡಿ ಮಾಲೀಕ

ಕಳ್ಳತನ ಮಾಡಿದ್ದನೆಂದು ಬಾಲಕನಿಗೆ ಇಂತಹ ಗತಿ ತಂದ ಕಿರಾಣಿ ಅಂಗಡಿ ಮಾಲೀಕ
ಬೆಂಗಳೂರು , ಗುರುವಾರ, 25 ಮಾರ್ಚ್ 2021 (06:59 IST)
ಬೆಂಗಳೂರು : 10 ವರ್ಷದ ಬಾಲಕನನ್ನು ಕ್ರೂರವಾಗಿ ಥಳಿಸಿ ಬೆನ್ನಿನ ಮೇಲೆ ಭಾರವಾದ ಕಲ್ಲನ್ನು ಬಲವಂತವಾಗಿ ಹೊರಿಸಿ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಸ್ತುಗಳನ್ನು ಖರೀದಿಸಲು ಬಾಲಕ ಕಿರಾಣಿ ಅಂಗಡಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಬಾಲಕ ಮನೆಗೆ ಬರದಿದ್ದಾಗ ಪೋಷಕರು ಆತನನ್ನು ಹುಡುಕಿಕೊಂಡು ಬಂದಾಗ ಆತ ಕಳ್ಳತನ ಮಾಡಲು ಮುಂದಾದ ಕಾರಣ ಆತನಿಗೆ ಶಿಕ್ಷೆ ವಿಧಿಸಿರುವುದಾಗಿ ಅಂಗಡಿ ಮಾಲೀಕ ಹೇಳಿದ್ದಾನೆ. ಮಾಲೀಕ ಆತನನ್ನು ಬಿಡುಗಡೆ ಮಾಡಿದ ಬಳಿಕ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೇಲೆ 4 ತಿಂಗಳುಗಳ ಕಾಲ ಮಾನಭಂಗ ಎಸಗಿದ ಮಲತಂದೆ