Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವೋಟ್ ಹಾಕಿದ್ರೆ ಮಾತ್ರ ದಕ ಜಿಲ್ಲೆಯವರಿಗೆ ಸವಲತ್ತಾ: ಶೋಭಾ ಕರಂದ್ಲಾಜೆ

Shobha Karandlaje

Krishnaveni K

ಬೆಂಗಳೂರು , ಶನಿವಾರ, 31 ಮೇ 2025 (17:18 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಲೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕೆಡುತ್ತದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆರೋಪಿಸಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡಲು ಕಾಂಗ್ರೆಸ್ ಸರಕಾರ, ಅವರ ಇಬ್ಬಗೆಯ ನೀತಿ ಹಾಗೂ ತುಷ್ಟೀಕರಣದ ನೀತಿ ಕಾರಣ ಎಂದು ಅವರು ಆಕ್ಷೇಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸಲ್ಮಾನರಿಗೆ ರಕ್ಷಣೆ ಇಲ್ಲ; ಅವರು ಮಾತನಾಡುವ ಹಾಗೆ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದರು ಎಂದರಲ್ಲದೆ, ದಿನೇಶ್ ಗುಂಡೂರಾವ್ ಅವರು ಏನು ಮಾತನಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. ಯಾರು ರಕ್ಷಣೆ ಕೊಡಬೇಕು? ಯಾಕೆ ರಕ್ಷಣೆ ಸಿಗುತ್ತಿಲ್ಲ ಎಂದು ಕೇಳಿದರು. ದಿನೇಶ್ ಗುಂಡೂರಾವ್ ಅವರ ನೀತಿ ಕೇವಲ ತುಷ್ಟೀಕರಣ ಮತ್ತು ಮತಬ್ಯಾಂಕನ್ನು ತೋರಿಸುತ್ತದೆ ಎಂದು ನುಡಿದರು.

ಮತಬ್ಯಾಂಕ್ ಬಿಟ್ಟು ಬೇರೇನೂ ಕಾಂಗ್ರೆಸ್ಸಿಗರಿಗೆ ಕಾಣುತ್ತಿಲ್ಲ; ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೇ ಉದಾಹರಣೆ ಎಂದು ದೂರಿದರು. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಸರಕಾರಿ ಯೋಜನೆ ಬೇಕು. ಆದರೆ ನಾವು ಬೇಡ ಎಂದಿದ್ದಾರೆ; ಇದರ ಅರ್ಥ ಏನು ಎಂದು ಕೇಳಿದರು. ಯಾರು ನಿಮಗೆ ಮತ ಹಾಕಿದ್ದಾರೋ ಅವರಿಗೆ ಮಾತ್ರ ಗ್ಯಾರಂಟಿ ಕೊಡುವವರೇ? ಅವರು ಮಾತ್ರ ಸರಕಾರಿ ಯೋಜನೆಯ ಸೌಲಭ್ಯ ಪಡೆಯಬೇಕೇ ಎಂದು ಕೇಳಿದರು.
 
ನಿಮ್ಮ ಉದ್ದೇಶ ಏನು? ನಿಮ್ಮ ಮಾತೇನು ಎಂದು ನಮಗೆ ಅರ್ಥವಾಗುತ್ತಿಲ್ಲ. ಹಿಂದೆ ಸಿದ್ದರಾಮಯ್ಯನವರು ಜಾತಿ ಜಾತಿಯನ್ನು ಒಡೆಯಲು ಶುರು ಮಾಡಿದ್ದರು. 2013ರ ಸರಕಾರದಲ್ಲೂ ಜಾತಿ ಜಾತಿ ನಡುವೆ ವೈಷಮ್ಯ ತಂದ ಸರಕಾರ ನಿಮ್ಮದು. ಲಿಂಗಾಯತರನ್ನು ಒಡೆದಿದ್ದರು. ಕೇವಲ ಒಂದು ಜಾತಿಯವರಿಗೆ ಮಾತ್ರ ಶಾಲಾ ಪ್ರವಾಸ ಮಾಡಿದ್ದರು ಎಂದು ಆಕ್ಷೇಪಿಸಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಬೀದಿಗಿಳಿದಾರು: ಡಿ.ವಿ.ಸದಾನಂದಗೌಡ