Select Your Language

Notifications

webdunia
webdunia
webdunia
webdunia

ಶೀರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣ: ಸಿಸಿಟಿವಿ ಡಿವಿಆರ್ ನಾಪತ್ತೆ

ಶೀರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣ: ಸಿಸಿಟಿವಿ  ಡಿವಿಆರ್ ನಾಪತ್ತೆ
ಉಡುಪಿ , ಸೋಮವಾರ, 23 ಜುಲೈ 2018 (15:19 IST)
ಶೀರೂರು ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಏತನ್ಮಧ್ಯೆ ಪೊಲೀಸ್ ಇಲಾಖೆಯ ತನಿಖೆಯು ತೀವ್ರಗೊಳ್ಳುತ್ತಿದ್ದಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶೀರೂರು ಮೂಲಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

 
ಶೀರೂರು ಮೂಲಮಠದಲ್ಲಿದ್ದ ಸಿಸಿಟಿವಿ  ಡಿವಿಆರ್ ನಾಪತ್ತೆಯಾಗಿದೆ. ನಾಪತ್ತೆಯಾದ ಡಿವಿಆರ್ ಗಾಗಿ ಶೋಧ ಮುಂದುವರೆದಿದೆ. ಸ್ವಾಮೀಜಿ ಆಸ್ಪತ್ರೆಗೆ ದಾಖಲಾದ ದಿನನಾಪತ್ತೆಯಾದ ಸಿಸಿಟಿವಿ ಡಿವಿಆರ್ ಈವರೆಗೂ ಪತ್ತೆಯಾಗಿಲ್ಲ.

ಶೀರೂರು ಮೂಲಮಠದಿಂದ ವಸ್ತುಗಳನ್ನು ಎಗರಿಸಿದ್ದ ವ್ಯಕ್ತಿ ಈ ಕೃತ್ಯ ಮಾಡಿರಬಹುದೆಂದು ಹೇಳಲಾಗುತ್ತಿದೆ. ಆತನೇ ಡಿವಿಆರ್ ತೆಗೆದುಕೊಂಡು ಹೋಗಿರುವ ಸಾಧ್ಯತೆ ಎನ್ನಲಾಗಿದೆ. ಈ ನಿಟ್ಡಿನಲ್ಲಿ ಪೊಲೀಸ್ ವಿಚಾರಣೆ ತೀವ್ರಗೊಂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ತೃತೀಯರಂಗ ನಾಯಕತ್ವಕ್ಕೆ ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದ ಶೆಟ್ಟರ್