Select Your Language

Notifications

webdunia
webdunia
webdunia
webdunia

ಶಿರೂರು ಶ್ರೀಗಳ ಆಭರಣ; ಊಟ ಕೊಡುತ್ತಿದ್ದವಳ ಮೈಮೇಲೆ ಬಂದದ್ದು ಹೇಗೆ?

ಶಿರೂರು ಶ್ರೀಗಳ ಆಭರಣ; ಊಟ ಕೊಡುತ್ತಿದ್ದವಳ ಮೈಮೇಲೆ ಬಂದದ್ದು ಹೇಗೆ?
ಉಡುಪಿ , ಶನಿವಾರ, 21 ಜುಲೈ 2018 (19:25 IST)
ಶಿರೂರು ಶ್ರೀಗಳ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶ್ರೀಗಳ ಸಾವಿನಲ್ಲಿ ಯಾರೆಲ್ಲರ ಕೈವಾಡ ಇರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದರೆ, ಇತ್ತ ಮಾಧ್ಯಮ ಮತ್ತು ಸಾರ್ವಜನಿಕರಲ್ಲೂ ವಿವಿಧ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಶ್ರೀಗಳ ಅಸಹಜ ಸಾವಿನ ಚರ್ಚೆ ಹಲವಡೆ ಹಲವು ರೀತಿಯಲ್ಲಿ ಸುತ್ತಿ ಈಗ ಒಂದು ಹೆಣ್ಣಿನ ಬಳಿ ಬಂದು ನಿಂತಿದೆ ಹೆಣ್ಣು ಮತ್ತಾರು ಅಲ್ಲ ಶ್ರೀಗಳಿಗೆ ಫಲಹಾರ, ಊಟ ತಂದು ಕೊಡುತ್ತಿದ್ದ ಮಣಿಪಾಲದ ಮಹಿಳೆ ರಮ್ಯಾ ಶೆಟ್ಟಿ.

 
ರಮ್ಯಾ ಶೆಟ್ಟಿ ಪ್ರತಿದಿನ ಶೀರೂರು ಶ್ರೀಗಳಿಗೆ ಊಟ ತಂದು ಕೊಡುತ್ತಿದ್ದರಂತೆ. ಶ್ರೀಗಳ ಸಾವಿನ ಪ್ರಕರಣ ಈಗ ರಮ್ಯಾ ಶೆಟ್ಟಿಯ ಸುತ್ತ ಸುಳಿಯಲು ಕಾರಣ ಶೀರೂರು ಶ್ರೀ ತೊಡುತ್ತಿದ್ದ ಚಿನ್ನಾಭರಣವನ್ನ ತೊಟ್ಟು ಫೋಟೊ ಶೂಟ್ ಮಾಡಿದ್ದಾರೆ ಎನ್ನಲಾದ ಫೋಟೋ. ಶೀರೂರು ಸ್ವಾಮೀಜಿಗಳು ಧರಿಸುವ  ಚಿನ್ನದ ಕಡಗ, ಸರ ರಮ್ಯಾ ಶೆಟ್ಟಿ ಹಾಕಿಕೊಂಡು ಫೋಟೋ ತೆಗೆಸಿ ಕೊಂಡಿದ್ದಾರೆ. ಆದರೆ ರಮ್ಯಾ ಶೆಟ್ಟಿ ಧರಿಸಿರುವ ಆಭರಣಗಳು ಶೀರೂರು ಶ್ರೀಗಳದ್ದೇ ಎಂಬ ಬಗ್ಗೆ  ಖಚಿತ ಪಡಿಸಿಕೊಳ್ಳಲು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ಒಮ್ಮೆ ರಮ್ಯಾ ಶೆಟ್ಟಿ ಧರಿಸಿರುವ ಆಭರಣಗಳು  ಶ್ರೀಗಳದ್ದೇ ಆದಲ್ಲಿ  ಅವು ಮಹಿಳೆಯ ಬಳಿ ಹೇಗೆ ಬಂದವು. ಆಭರಣಗಳೆಲ್ಲವನ್ನೂ ನೀಡುವಷ್ಟು ಆಪ್ತತೆ ರಮ್ಯಾ ಶೆಟ್ಟಿ ಮತ್ತು ಶ್ರೀಗಳ ನಡುವೆ ಇತ್ತೆ? ಇದು ಯಾವ ಪರಿಯ ಆಪ್ತತೆ ಎನ್ನುವ ಪ್ರಶ್ನೆ ಫೋಟೋದಿಂದ ಚರ್ಚೆಯಾಗುತ್ತಿದೆ. ಅಲ್ಲದೆ ರಮ್ಯಾ ಶೆಟ್ಟಿ ಶ್ರೀಗಳಿಗೆ ಊಟವನ್ನ ಆಟೋದಲ್ಲಿ ತಂದು ಕೊಡುತ್ತಿದ್ದವಳು.

ತದನಂತರದಲ್ಲಿ ಕಾರಿನಲ್ಲಿ ಬಂದು ಊಟ ನೀಡುತ್ತಿದ್ದಳು ಎನ್ನಲಾಗುತ್ತಿದ್ದು, ವಿಷಯ ಕೂಡಾ ಈಗ ಚರ್ಚಾ ವಸ್ತುವಾಗಿದ್ದಲ್ಲದೆ, ಅನೇಕ ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಒಟ್ಟಾರೆ ಶ್ರೀಗಳ ಅಸಹಜ ಸಾವಿನ ಪ್ರಕರಣ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ. ಊಹೆ, ಸಾಧ್ಯತೆಗಳು ಏನೇ ಇದ್ದರೂ ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೆ ಸತ್ಯಾಸತ್ಯತೆ ತಿಳಿದು ಬರಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ ಮೇಲೆ ಸಚಿವ ರಮೇಶ ಜಾರಕಿಹೊಳಿ ಸಿಡಿಮಿಡಿ