Select Your Language

Notifications

webdunia
webdunia
webdunia
webdunia

ಪೇಜಾವರ ಶ್ರೀಗಳು ಶಿರೂರು ಶ್ರೀಗಳ ಅಂತಿಮ ದರ್ಶನ ಪಡೆಯದೇ ಇರಲು ಕಾರಣವೇನು ಗೊತ್ತಾ?!

ಪೇಜಾವರ ಶ್ರೀಗಳು ಶಿರೂರು ಶ್ರೀಗಳ ಅಂತಿಮ ದರ್ಶನ ಪಡೆಯದೇ ಇರಲು ಕಾರಣವೇನು ಗೊತ್ತಾ?!
ಉಡುಪಿ , ಶುಕ್ರವಾರ, 20 ಜುಲೈ 2018 (09:47 IST)
ಉಡುಪಿ: ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಪೇಜಾವರ ಶ್ರೀಗಳು ಹೋಗದೇ ಇರುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.

ಶ್ರೀಗಳ ಹೇಳಿಕೆಗಳ ಬಗ್ಗೆ ನನಗೂ ಅವರಿಗೂ ಭಿನ್ನಾಭಿಪ್ರಾಯವಿತ್ತು. ಆದರೆ ವೈಯಕ್ತಿಕವಾಗಿ ಪರಸ್ಪರ ನಮಗೆ ವಿಶ್ವಾಸವಿತ್ತು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಅದರ ಜತೆಗೆ ಶಿರೂರು ಶ್ರೀಗಳ ಬಗ್ಗೆ ದೊಡ್ಡ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ಶಿರೂರು ಶ್ರೀಗಳ ಪಾರ್ಥಿವ ಶರೀರ ನೋಡದಿರಲು ತಾತ್ವಿಕ ಮತ್ತು ನೈತಿಕ ಕಾರಣವಿದೆ ಎಂದ ಪೇಜಾವರ ಶ್ರೀ, ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ನೀಡದೇ ಇರಲು ಕಾರಣ ಬೇರೆಯದೇ ಇದೆ ಎಂದಿದ್ದಾರೆ.

ಯಾವ ಮಠಾಧೀಶರಿಗೂ ಅವರ ಮೇಲೆ ಧ್ವೇಷವಿಲ್ಲ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದರು. ಅವರಿಗೆ ಒಬ್ಬ ಪತ್ರನಿದ್ದಾನೆ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದರು. ಹಾಗಾಗಿಯೇ ಮಠಾಧೀಶರು ಅವರ ಪಾರ್ಥಿವ ಶರೀರ ನೋಡಲು ಹೋಗಲಿಲ್ಲ ಎಂದು ಪೇಜಾವರ ಶ್ರೀ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿನ ಬಗ್ಗೆ ಮೊದಲೇ ಶಿರೂರು ಶ್ರೀಗಳಿಗೆ ಸಿಕ್ಕಿತ್ತಾ ಮುನ್ಸೂಚನೆ?!