Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆ.. ವಿದ್ಯಾರ್ಥಿಗಳ ಪರದಾಟ!

ಶಕ್ತಿ ಯೋಜನೆ.. ವಿದ್ಯಾರ್ಥಿಗಳ ಪರದಾಟ!
ಕಲಬುರಗಿ , ಶುಕ್ರವಾರ, 14 ಜುಲೈ 2023 (19:00 IST)
ಶಕ್ತಿ ಯೋಜನೆಯ ಪರಿಣಾಮ ಕಲಬುರಗಿ ಜಿಲ್ಲೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.. ಕಲಬುರಗಿ ನಗರದಿಂದ ಚೌಡಾಪುರ ಮಾರ್ಗವಾಗಿ ವಿವಿಧೆಡೆ ತೆರಳುವ ಬಸ್​ಗಳು ಜನರಿಂದ ತುಂಬಿ ತುಳುಕುತ್ತಿವೆ. ಹತ್ತಾರು ಹಳ್ಳಿಗಳಿಗೆ ಸಂಚಾರ ಮಾಡುವ ಸಾರಿಗೆ ಬಸ್‌ಗಳು ಫುಲ್ ರಶ್​ ಆಗಿದ್ದು, ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್​ಗಳಲ್ಲಿ ದಿನನಿತ್ಯ 100 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರ ನಡುವೆ ಕಂಡಕ್ಟರ್​​ ಟಿಕೆಟ್​ ಕೊಡಲು ಹರಸಾಹಸ ಪಡುತ್ತಿದ್ದಾರೆ.. ವಿದ್ಯಾರ್ಥಿಗಳು ಬಸ್​ನ ಡೋರ್​ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಸಾರಿಗೆ ಇಲಾಖೆ ಎಚ್ಚೆತ್ತು ಹೆಚ್ಚುವರಿ ಬಸ್​ಗಳನ್ನು ಬಿಡುಗಡೆ ಮಾಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನೇ ಕೊಂದ ಪಾಪಿ ಪತಿ