Select Your Language

Notifications

webdunia
webdunia
webdunia
webdunia

ಎಸ್.ಡಿ.ಆರ್.ಎಫ್. ಬಲಪಡಿಸಲು ಸರಕಾರ ಮಾಡಿದ್ದೇನು?

ಎಸ್.ಡಿ.ಆರ್.ಎಫ್. ಬಲಪಡಿಸಲು ಸರಕಾರ ಮಾಡಿದ್ದೇನು?
ಬೆಳಗಾವಿ , ಶನಿವಾರ, 2 ನವೆಂಬರ್ 2019 (17:01 IST)
ತುರ್ತು ಸಂದರ್ಭಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಎಸ್.ಡಿ.ಆರ್.ಎಫ್.  ಬಲಪಡಿಸಲಾಗುತ್ತಿದೆ.

ಇದಕ್ಕಾಗಿ 20 ಕೋಟಿ ಅನುದಾನ ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎನ್.ಡಿ.ಆರ್.ಎಫ್. ಮಾದರಿಯಲ್ಲಿ ಸಿಬ್ಬಂದಿ ನೇಮಕ, ತರಬೇತಿ, ಸಾಧನ-ಸಲಕರಣೆಗಳನ್ನು ಒದಗಿಸಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಶೇ.60 ರಷ್ಟು ಸಿಬ್ಬಂದಿಗೆ ವಸತಿಗೃಹ ಕಲ್ಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಶೇ.80 ಸಿಬ್ಬಂದಿಗೆ ವಸತಿಗೃಹ ಒದಗಿಸುವುದು ಸರ್ಕಾರದ ಗುರಿಯಾಗಿದೆ.

ಪೊಲೀಸ್ ಸುಧಾರಣೆ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರದ ನೆರವಿನಿಂದ ಎಲ್ಲ ಸೌಲಭ್ಯ ಒದಗಿಸಲಾಗುವುದು. ಜನಸ್ನೇಹಿ ಠಾಣೆ ನಿರ್ಮಾಣ ಮಾಡಲಾಗುವುದು ಅಂತ ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನವೇ ಕುರ್ಚಿಯಿಂದ ಬಡಿದಾಡಿಕೊಂಡ ವಧು-ವರನ ಕಡೆಯವರು!