Select Your Language

Notifications

webdunia
webdunia
webdunia
webdunia

ಸಾರಕ್ಕಿ ಮಾರ್ಕೆಟ್ ತೆರವು

ಸಾರಕ್ಕಿ ಮಾರ್ಕೆಟ್ ತೆರವು
bangalore , ಭಾನುವಾರ, 6 ಫೆಬ್ರವರಿ 2022 (20:06 IST)
ಇಂದು ಬೆಳ್ಳಂಬೆಳಗ್ಗೆ ಸಾರಕ್ಕಿ ಮಾರ್ಕೆಟ್ ವ್ಯಾಪಾರಸ್ಥರಿಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದರು. ಬನಶಂಕರಿಯ  ಸಾರಕ್ಕಿ ಮಾರ್ಕೆಟ್ ನ ಫುಟ್ ಪಾತ್ ನಲ್ಲಿ ಇರುವ  ಅಂಗಡಿಗಳಿಂದ ಪಾದಚಾರಿಗಳಿಗೆ ಪುತ್ಪಾಟ್ ಇಲ್ಲದಂತಾಗಿದ್ದು..  ಪ್ರತಿನಿತ್ಯ ಈ ಅಂಗಡಿಗಳಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ..   ಈ ಹಿಂದೆಯೇ ವಾರ್ನಿಂಗ್ ಮಾಡಿದರು ವ್ಯಾಪಾರಸ್ಥರು ಕ್ಯಾರೇ ಅನ್ನದ ಕಾರಣ, ಇದ್ದಕಿದ್ದ ಹಾಗೆ ಇಂದು ಬೆಳೆಗೆ ಪುತ್ಪಾಟ್ ನಲ್ಲಿ ಇರುವ ಅಂಗಡಿಗಳನ್ನೂ ಬಿಬಿಎಂಪಿ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಹಾಗೂ ಮಾರ್ಷಲ್ಗಳ ನೇತೃತ್ವದಲ್ಲಿ ಅಲ್ಲಿರುವ ವ್ಯಾಪಾರಿಗಳ ಅಂಗಡಿ ಗಳನ್ನು ತೆರವು ಮಾಡಿದ್ದಾರೆ. ಆದರೆ ವ್ಯಾಪಾರಸ್ಥರು ಇದರಿಂದ ಆಕ್ರೋಶಗೊಂಡು ಹೇಳದೆ ಕೇಳದೆ ಅಂಗಡಿಗಳನ್ನು ತೆರವು ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಹಳ್ಳ ಹಿಡಿದ ಮಹತ್ವಾಕಾಂಕ್ಷಿ ಯೋಜನೆ