Select Your Language

Notifications

webdunia
webdunia
webdunia
Saturday, 12 April 2025
webdunia

ಕುಂಕುಮ ಅಂಗಡಿಯವನ ದೇಹದಿಂದ ಹರಿದ ನೆತ್ತರು

ಕುಂಕುಮ
ಮೈಸೂರು , ಭಾನುವಾರ, 30 ಜೂನ್ 2019 (17:40 IST)
ಕೆಂಪು ಕುಂಕುಮ ಅಂಗಡಿ ಇಟ್ಟುಕೊಂಡಿದ್ದವನನ್ನು ಬರ್ಬರವಾಗಿ ಕೊಲೆ ಮಾಡಿ ಆತನ ದೇಹದಿಂದ ನೆತ್ತರು ಹರಿಸಿದ ಘಟನೆ ನಡೆದಿದೆ.

ಮೈಸೂರಿನಲ್ಲಿ ಹಾಡುಹಗಲೇ ಯುವಕನೊಬ್ಬನ ಬರ್ಬರ ಕೊಲೆ ಪ್ರಕರಣ ನಡೆದಿದೆ. ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ ಪೊಲೀಸರು.

ಅಪಘಾತ ವಿಚಾರವಾಗಿ ದ್ವೇಷದಿಂದ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ನಡೆದಿದ್ದ ಅಪಘಾತದಲ್ಲಿ ಎಂಟ್ರಿಯಾಗಿದ್ದನು ಮೃತ ಸುನೀಲ್ ಮತ್ತು ಸ್ನೇಹಿತರು.

ಇದೇ ವಿಚಾರವಾಗಿ ಕೊಲೆ ಆರೋಪಿಗಳು ಹಾಗೂ ಸುನೀಲ್ ಅಂಡ್ ಟೀಂ ನಡುವೆ ಗಲಾಟೆ ನಡೆದಿತ್ತು. ಇದೇ ದ್ವೇಷದಿಂದ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಕುಂಕುಮದ ಅಂಗಡಿ ಇಟ್ಟಿದ್ದ ಸುನೀಲ್ ನ ಬರ್ಬರ ಕೊಲೆ ಮಾಡಲಾಗಿದೆ.

ಸಣ್ಣ ಅಪಘಾತದ ಜಗಳ ಸುನೀಲ್ ನ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.   



 

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ