Select Your Language

Notifications

webdunia
webdunia
webdunia
webdunia

ಪಾಪನಾಶ ದೇವಾಲಯ ಪೂಜಾರಿಯ ಬರ್ಬರ ಕೊಲೆ

ಪಾಪನಾಶ ದೇವಾಲಯ ಪೂಜಾರಿಯ ಬರ್ಬರ ಕೊಲೆ
ಬೀದರ್ , ಮಂಗಳವಾರ, 11 ಜೂನ್ 2019 (14:57 IST)
ದೇವಾಲಯದ ಪೂಜೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಪಾಪನಾಶ ದೇವಾಲಯದ ಪೂಜಾರಿಯ ಕೊಲೆ ನಡೆದಿದೆ.

ಬೀದರ್ ನ ಐತಿಹಾಸಿಕ ಪಾಪನಾಶ ದೇವಾಲಯದ ಅರ್ಚಕ ರಮೇಶ ಮಲ್ಲಯ್ಯ ಸ್ವಾಮಿ (39) ಕೊಲೆಯಾದವರು. ಪಾಪನಾಶ ದೇವಾಲಯ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ತಡರಾತ್ರಿ ಕೊಲೆ ಮಾಡಲಾಗಿದೆ.

ತಲಾ ಒಂದು ವರ್ಷಗಳ ಕಾಲ ಎರಡು ಕುಟುಂಬಗಳು ಪೂಜೆ ಕೆಲಸ ಮಾಡುವುದುನ್ನು ಹಂಚಿಕೆ ಮಾಡಿಕೊಂಡಿದ್ದವು. ಮುಂದಿನ ತಿಂಗಳಿಂದ ಕೊಲೆಯಾದ ರಮೇಶ ಸ್ವಾಮಿ ಸರದಿ ಇತ್ತು. ದೇವಸ್ಥಾನದ ಪೂಜೆಕಾರ್ಯ ಬಿಟ್ಟುಕೊಡಲು ಇಷ್ಟವಿಲ್ಲದ ಕಾರಣ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರಮೇಶ್ ಸ್ವಾಮಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಇಷ್ಟುದಿನ ಖಾಸಗಿ ಹೋಟೆಲ್ - ಸಿಎಂರಿಂದ ಈಗ ಗ್ರಾಮ ವಾಸ್ತವ್ಯ: ವ್ಯಂಗ್ಯ