Select Your Language

Notifications

webdunia
webdunia
webdunia
webdunia

ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರದಬ್ಬಿ

ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರದಬ್ಬಿ
ರಾಮನಗರ , ಸೋಮವಾರ, 29 ಜುಲೈ 2019 (14:50 IST)
ಉಗ್ರರು ಪತ್ತೆಯಾದ ಹಿನ್ನೆಲೆಯಲ್ಲಿ ಭಯೋತ್ಪಾದನೆ ತೊಲಗಿಸಿ ಅಂತ ಅಭಿಯಾನ ನಡೆಸಲಾಗುತ್ತಿದ್ದು, ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರದಬ್ಬುವಂತೆ ಮತ್ತೆ ಒತ್ತಾಯ ಕೇಳಿಬರುತ್ತಿದೆ.

ಉಗ್ರರ ಪತ್ತೆ ಹಿನ್ನಲೆಯಲ್ಲಿ ಭಯೋತ್ಪಾದನೆ ತೊಲಗಿಸಿ ರಾಮನಗರ ರಕ್ಷಿಸಿ ಅಭಿಯಾನ ನಡೆಯಿತು.
ರಾಮನಗರ ನಾಗರಿಕ ಹಿರತಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಮೆರವಣಿಗೆ ಸಾಗಿತು.

ನಗರದ ಹಳೆ ಬಸ್ ನಿಲ್ದಾಣದಿಂದ ಎಸ್ಪಿ ಕಛೇರಿ ವರೆಗೂ ಮೆರವಣಿಗೆ ಜಾಥಾ ನಡೆಯಿತು. ರಾಮನಗರ ಜಿಲ್ಲೆ ಉಗ್ರರ ಅಡಗುತಾಣ ಆಗ್ತಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಹೊರದಬ್ಬಬೇಕು. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡಿದ್ರು.  



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಅನರ್ಹಗೊಂಡರೆ ಕ್ಷೇತ್ರದ ಜನರಿಗೆ ಭಯ?