Select Your Language

Notifications

webdunia
webdunia
webdunia
webdunia

ಶಾಸಕ ಅನರ್ಹಗೊಂಡರೆ ಕ್ಷೇತ್ರದ ಜನರಿಗೆ ಭಯ?

ಶಾಸಕ ಅನರ್ಹಗೊಂಡರೆ ಕ್ಷೇತ್ರದ ಜನರಿಗೆ ಭಯ?
ರಾಯಚೂರು , ಸೋಮವಾರ, 29 ಜುಲೈ 2019 (14:41 IST)
ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ ಗೌಡ ಪಾಟೀಲ್​ ಅನರ್ಹಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಕ್ಷೇತ್ರ ಹಾಗೂ ಜಿಲ್ಲೆಯ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿದ್ದ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ ಗೌಡ ಪಾಟೀಲ್ ಅನರ್ಹಗೊಂಡ ಬೆನ್ನೆಲ್ಲೇ ವಿಡಿಯೋ ಸಂದೇಶ ರವಾನಿಸಿದ್ದಾರೆ. ಸ್ಪೀಕರ್ ಅವರು ನಮ್ಮನ್ನು ಅನರ್ಹಗೊಳಿಸಿದ್ದಾರೆ. ಶೀಘ್ರವೇ ಸುಪ್ರೀಂಕೋರ್ಟ್ ಮೂಲಕ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಹಾಗೂ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.

ನನ್ನ ಕ್ಷೇತ್ರದ ಜನರು ಭಯ ಪಡುವ ಅಗತ್ಯವಿಲ್ಲ. ಶೀಘ್ರವೇ ಕ್ಷೇತ್ರಕ್ಕೆ ಬಂದು ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ. ಶಾಸಕ ಪ್ರತಾಪ ಗೌಡ ಪಾಟೀಲ್​ ಅನರ್ಹರಾಗಿದ್ದಾರೆ.

ಪ್ರತಾಪ ಗೌಡ ಪಾಟೀಲ್ ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಾಗಿನಿಂದ ಜಿಲ್ಲೆ ಹಾಗೂ ಕ್ಷೇತ್ರದ ‌ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬರದ ನಡುವೆ ಕ್ಷೇತ್ರದಲ್ಲಿರಬೇಕಾದವರು, ಮುಂಬೈನಲ್ಲಿದ್ದುಕೊಂಡು ರಾಜಕೀಯ ಆಟ ಅಡುತ್ತಿದ್ದಾರೆ ಎಂದು ಟೀಕೆಗಳು ಕೂಡ ವ್ಯಕ್ತವಾಗಿದ್ದವು.




Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಶಾಕ್?: ಡಿಸಿಎಂ ಬೇಡ ಸಿಎಂ ಹುದ್ದೆ ಬೇಕೆಂದ ಬಿಜೆಪಿ ಮುಖಂಡ