Select Your Language

Notifications

webdunia
webdunia
webdunia
webdunia

ನಡುರಸ್ತೆಯಲ್ಲಿ ರೌಡಿಶೀಟರ್ ಅಮಾಯಕರ ಮೇಲೆ ಹಲ್ಲೆ

ನಡುರಸ್ತೆಯಲ್ಲಿ ರೌಡಿಶೀಟರ್ ಅಮಾಯಕರ ಮೇಲೆ ಹಲ್ಲೆ
ಬೆಂಗಳೂರು , ಬುಧವಾರ, 9 ಫೆಬ್ರವರಿ 2022 (18:07 IST)
ಹಣಕಾಸು ವಿಚಾರದಲ್ಲಿ ಓರ್ವ ರೌಡಿಶೀಟರ್​ ನಡು ರಸ್ತೆಯಲ್ಲೇ ಅಮಾಯಕ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗ ಳೂರಿನ ಅಟ್ಟೂರು ಲೇಔಟ್​ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್​ ಶ್ರೀಕಾಂತ್​, ಚರಣ್​ರಾಜ್​ ಮೇಲೆ ಹಲ್ಲೆ ಮಾಡಿದ್ದಾನೆ.
ಗೂಡ್ಸ್​ ​ವಾಹನಕ್ಕೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾನೆ. ಆರೋಪಿ ಪರವಾಗಿ ಮತ್ತೊಬ್ಬ ರೌಡಿಶೀಟರ್​​ ಧಮ್ಕಿ ಹಾಕಿದ್ದಾನೆ. ಈ ಬಗ್ಗೆ ಚರಣ್ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ರೌಡಿಶೀಟರ್ ಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ ಕೇಸ್ ವಾಪಸ್ ತಗೊ ಎಂದು ರೌಡಿಶೀಟರ್ ಪ್ರವೀಣ್ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ಚರಣ್ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಘಟನೆ ನಡೆದು ಒಂದು ವಾರ ಕಳೆದರೂ ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ಯಲಹಂಕ‌ ನ್ಯೂಟೌನ್ ಪೊಲೀಸರ ನಿರ್ಲಕ್ಷ್ಯದಿಂದ ಏರಿಯಾದಲ್ಲೇ ಭಯದ ವಾತಾವರಣ ಸೃಷ್ಟಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿವಾದ ಯಾವುದೇ ವಿದ್ಯಾರ್ಥಿಗಳ ಬಂಧನ ಆಗಿಲ್ಲ