Webdunia - Bharat's app for daily news and videos

Install App

ದರ್ಶನ್ ಅರೆಸ್ಟ್: ರೇಣುಕಾಸ್ವಾಮಿ ಮರಣೋತ್ತರ ವರದಿಯಲ್ಲಿದೆ ಶಾಕಿಂಗ್ ವಿಚಾರಗಳು

Krishnaveni K
ಗುರುವಾರ, 13 ಜೂನ್ 2024 (13:46 IST)
ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನ ಟಾರ್ಚರ್ ನಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿಗಳು ಬಂದಿದ್ದು, ಬೆಚ್ಚಿ ಬೀಳಿಸುವ ಅಂಶಗಳು ಬಹಿರಂಗವಾಗಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್ ಸ್ನೇಹಿತರು ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿರುವುದು ವಿಚಾರಣೆ ವೇಳೆ ಬಹಿರಂಗವಾಗಿತ್ತು. ರೇಣುಕಾಸ್ವಾಮಿ ಮೃತದೇಹದ ಮೇಲೂ ಸಿಕ್ಕಾಪಟ್ಟೆ ಗಾಯಗಳಿತ್ತು. ಅಲ್ಲದೆ, ಸಿಗರೇಟ್ ನಿಂದ ಸುಟ್ಟ ಕಲೆಗಳಿತ್ತು. ದವಡೆ ಕಿತ್ತುಕೊಂಡು ಬಂದಿತ್ತು.

ಇದೀಗ ಮರಣೋತ್ತರ ಪರಿಕ್ಷೆಯಲ್ಲೂ ದರ್ಶನ್ ಮತ್ತು ಸ್ನೇಹಿತರ ಹಲ್ಲೆಯ ತೀವ್ರತೆ ಎಷ್ಟಿತ್ತೆಂದು ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷಾ ವರದಿ ಪ್ರಕಾರ ಮರ್ಮಾಂಗಕ್ಕೆ ಒದ್ದ ಕಾರಣ ತೀವ್ರ
ರಕ್ತಸ್ರಾವವಾಗಿದೆ. ಅಲ್ಲದೆ ಹೊಟ್ಟೆಯಲ್ಲೂ ಆಂತರಿಕ ರಕ್ತಸ್ರಾವವಾಗಿದೆ. ರೇಣುಕಾಸ್ವಾಮಿ ಸಾವಿಗೆ ಇದೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಹೃದಯದ ಭಾಗಕ್ಕೆ ಪಂಚ್ ಮಾಡಲಾಗಿದೆ. ಪರಿಣಾಮ ಎದೆಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ಆತನ ಕಾಲು ಹಿಡಿದು ತಲೆಯನ್ನು ಗೋಡೆಗೆ ಗುದ್ದಲಾಗಿದ್ದು ಪರಿಣಾಮ ಮೆದುಳಿನಲ್ಲೂ ರಕ್ತಸ್ರಾವವಾಗಿದೆ. ಬೆಲ್ಟ್, ಮರದ ತುಂಡು ಅಥವಾ ರಾಡ್ ನಂತಹ ಬಲವಾದ ಆಯುಧದಿಂದ ಹೊಡೆದು ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ.

ಮರಣೋತ್ತರ ವರದಿಯಲ್ಲಿ ದೇಹದ 15 ಕಡೆ ಗಾಯವಾಗಿರುವುದು ಕನ್ ಫರ್ಮ್ ಆಗಿದೆ. ಇದಕ್ಕೆ ಮೊದಲು ಮೈಮೇಲೆ ಆಗಿದ್ದ ಗಾಯಗಳು ನಾಯಿ ಕಚ್ಚಿದ್ದರಿಂದ ಆಗಿದ್ದು ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಆದರೆ ಈಗ ಮರಣೋತ್ತರ ವರದಿಯಲ್ಲೇ ಹಲ್ಲೆ ನಡೆಸಿರುವುದು ಖಚಿತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments