Webdunia - Bharat's app for daily news and videos

Install App

ಕಷ್ಟದ ಸಂದರ್ಭದಲ್ಲಿ ಕೈ ಹಿಡಿದಿದ್ದ ವಯನಾಡನ್ನೇ ಬಿಡಲಿದ್ದಾರೆ ರಾಹುಲ್ ಗಾಂಧಿ

Krishnaveni K
ಗುರುವಾರ, 13 ಜೂನ್ 2024 (13:22 IST)
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಯನಾಡು ಮತ್ತು ರಾಯ್ ಬರೇಲಿಯಲ್ಲಿ ಸ್ಪರ್ಧಿಸಿ ಗೆದ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈಗ ಯಾವ ಕ್ಷೇತ್ರವನ್ನು ಆಯ್ಕೆ ಮಾಡುವುದು ಎಂಬ ಸಂದಿಗ್ಧತೆ ಎದುರಾಗಿದೆ.

ರಾಯ್ ಬರೇಲಿ ರಾಹುಲ್ ಗಾಂಧಿ ಮಾತ್ರವಲ್ಲ, ನೆಹರೂ ಕುಟುಂಬಕ್ಕೇ ತವರಿದ್ದಂತೆ. ಇಲ್ಲಿ ತಲೆತಲಾಂತರದಿಂದ ನೆಹರೂ ಕುಟುಂಬ ಸ್ಪರ್ಧೆ ನಡೆಸುತ್ತಲೇ ಇದೆ. ಈ ಬಾರಿ ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಕಂಡಿದ್ದರು. ಇದರ ಬೆನ್ನಲ್ಲೇ ಈಗ ಒಂದು ಕ್ಷೇತ್ರವನ್ನು ಬಿಡುವ ಅನಿವಾರ್ಯತೆ ರಾಹುಲ್ ಗೆ ಎದುರಾಗಿದೆ.

ಇದೀಗ ಕಾಂಗ್ರೆಸ್ ಮೂಲಗಳ ಪ್ರಕಾರ ರಾಹುಲ್ ವಯನಾಡು ಕ್ಷೇತ್ರವನ್ನು ಬಿಡಬಹುದು ಎನ್ನಲಾಗಿದೆ. ರಾಯ್ ಬರೇಲಿಯಾದರೆ ಕ್ಷೇತ್ರಕ್ಕೆ ಹೋಗಿ ಬರುವುದು ಸುಲಭ ಮತ್ತು ಸನಿಹ ಕೂಡಾ. ಆದರೆ ವಯನಾಡಿಗೆ ಆಗಾಗ ಬರುವುದಕ್ಕೆ ಆಗುವುದಿಲ್ಲ. ಹೀಗಾಗಿ ವಯನಾಡನ್ನು ಬಿಟ್ಟು ರಾಯ್ ಬರೇಲಿಯನ್ನು ಆರಿಸುವ ಸಾಧ್ಯತೆ ಹೆಚ್ಚಿದೆ.

ಆದರೆ 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೈ ಹಿಡಿದಿದ್ದು ಇದೇ ವಯನಾಡು ಕ್ಷೇತ್ರ. ಅ ಚುನಾವಣೆಯಲ್ಲಿ ರಾಹುಲ್ ಅಮೇಠಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದರು. ದುರದೃಷ್ಟವಶಾತ್ ಅಮೇಠಿಯಲ್ಲಿ ಸೋತಿದ್ದರು. ಆಗ ರಾಹುಲ್ ರನ್ನು ಗೆಲ್ಲಿಸಿದ್ದು ವಯನಾಡಿನ ಜನ. ಹೀಗಾಗಿ ಈಗ ಅಂದು ಅಮೇಠಿಯಲ್ಲಿ ಸೋತು ಸಂಕಷ್ಟಕ್ಕೀಡಾಗಿದ್ದ ರಾಹುಲ್ ಗಾಂಧಿ ಕೈ ಹಿಡಿದಿದ್ದ ವಯನಾಡನ್ನೇ ಈಗ ಕೈ ಬಿಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments