Select Your Language

Notifications

webdunia
webdunia
webdunia
webdunia

ವಿಲನ್ ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಈ ಸಾವಿನ ತೀವ್ರತೆ ಗೊತ್ತಾಗುತ್ತಿಲ್ಲವೇ: ನಟಿ ರಂಜಿನಿ ರಾಘವನ್

Ranjini Raghavan

Krishnaveni K

ಬೆಂಗಳೂರು , ಗುರುವಾರ, 13 ಜೂನ್ 2024 (11:08 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಬಗ್ಗೆ ಇದೀಗ ಚಿತ್ರರಂಗದ ಒಬ್ಬೊಬ್ಬರೇ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಇದೀಗ ಕಿರುತೆರೆಯಿಂದ ಹಿರಿತೆರೆ ಬಂದ ನಟಿ ರಂಜಿನಿ ರಾಘವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಹೆಸರು ಉಲ್ಲೇಖಿಸದೇ ಇದ್ದರೂ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ‘ವಿಲನ್ ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಈ ಸಾವಿನ ತೀವ್ರತೆ ಗೊತ್ತಾಗುತ್ತಿಲ್ಲವೇ?’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ರೇಣುಕಾಸ್ವಾಮಿ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಮತ್ತು ದರ್ಶನ್ ತಪ್ಪೇ ಮಾಡಿಲ್ಲ ಎಂದು ಪರ ವಹಿಸುತ್ತಿರುವವರಿಗೆ ರಂಜಿನಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಪುಟ್ಟಗೌರಿ ಮದುವೆ, ಕನ್ನಡತಿ ಮುಂತಾದ ಧಾರವಾಹಿಗಳ ಮೂಲಕ ಕನ್ನಡಿಗರ ಮನೆ ಮಗಳಾದ ರಂಜಿನಿ ರಾಘವನ್ ಬಳಿಕ ಸ್ಯಾಂಡಲ್ ವುಡ್ ನಲ್ಲೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಸಂಬಂಧಿ ಮನೋಜ್ ನಾಯಕರಾಗಿರುವ ಸಿನಿಮಾದಲ್ಲೇ ರಂಜಿನಿ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.

ದರ್ಶನ್ ಬಂಧಿತರಾದ ಬೆನ್ನಲ್ಲೇ ನಟಿ ರಮ್ಯಾ ತಮ್ಮಸೋಷಿಯಲ್ ಮೀಡಿಯಾದಲ್ಲಿ ಈ ಅಪರಾಧಕ್ಕೆ ಜೀವಾವಧಿ ಅಥವಾ ಗಲ್ಲು ಇದಕ್ಕಿಂತ ಕಡಿಮೆ ಶಿಕ್ಷೆ ಇರಬಾರದು ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ದರ್ಶನ್ ಆಪ್ತ ಸ್ನೇಹಿತೆ, ನಟಿ ರಕ್ಷಿತಾ ಕೂಡಾ ಜೀವನ ಎನ್ನುವುದು ಗಿಫ್ಟ್ ಎಂದು ಮಾರ್ಮಿಕವಾಗಿ ಒಂದು ಸಂದೇಶ ಬರೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿರಿಯಾನಿ, ಬಾಡೂಟ ಎಲ್ಲಾ ಬಂದ್, ಕಸ್ಟಡಿಯಲ್ಲಿರುವ ದರ್ಶನ್ ಗೆ ಈಗ ಜಸ್ಟ್ ಅನ್ನ ಸಾರು