Select Your Language

Notifications

webdunia
webdunia
webdunia
webdunia

ದರ್ಶನ್ ಅರೆಸ್ಟ್: ರೇಣುಕಾಸ್ವಾಮಿ ಮರಣೋತ್ತರ ವರದಿಯಲ್ಲಿದೆ ಶಾಕಿಂಗ್ ವಿಚಾರಗಳು

Renukaswamy

Krishnaveni K

ಬೆಂಗಳೂರು , ಗುರುವಾರ, 13 ಜೂನ್ 2024 (13:46 IST)
ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನ ಟಾರ್ಚರ್ ನಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿಗಳು ಬಂದಿದ್ದು, ಬೆಚ್ಚಿ ಬೀಳಿಸುವ ಅಂಶಗಳು ಬಹಿರಂಗವಾಗಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್ ಸ್ನೇಹಿತರು ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿರುವುದು ವಿಚಾರಣೆ ವೇಳೆ ಬಹಿರಂಗವಾಗಿತ್ತು. ರೇಣುಕಾಸ್ವಾಮಿ ಮೃತದೇಹದ ಮೇಲೂ ಸಿಕ್ಕಾಪಟ್ಟೆ ಗಾಯಗಳಿತ್ತು. ಅಲ್ಲದೆ, ಸಿಗರೇಟ್ ನಿಂದ ಸುಟ್ಟ ಕಲೆಗಳಿತ್ತು. ದವಡೆ ಕಿತ್ತುಕೊಂಡು ಬಂದಿತ್ತು.

ಇದೀಗ ಮರಣೋತ್ತರ ಪರಿಕ್ಷೆಯಲ್ಲೂ ದರ್ಶನ್ ಮತ್ತು ಸ್ನೇಹಿತರ ಹಲ್ಲೆಯ ತೀವ್ರತೆ ಎಷ್ಟಿತ್ತೆಂದು ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷಾ ವರದಿ ಪ್ರಕಾರ ಮರ್ಮಾಂಗಕ್ಕೆ ಒದ್ದ ಕಾರಣ ತೀವ್ರ
ರಕ್ತಸ್ರಾವವಾಗಿದೆ. ಅಲ್ಲದೆ ಹೊಟ್ಟೆಯಲ್ಲೂ ಆಂತರಿಕ ರಕ್ತಸ್ರಾವವಾಗಿದೆ. ರೇಣುಕಾಸ್ವಾಮಿ ಸಾವಿಗೆ ಇದೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಹೃದಯದ ಭಾಗಕ್ಕೆ ಪಂಚ್ ಮಾಡಲಾಗಿದೆ. ಪರಿಣಾಮ ಎದೆಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ಆತನ ಕಾಲು ಹಿಡಿದು ತಲೆಯನ್ನು ಗೋಡೆಗೆ ಗುದ್ದಲಾಗಿದ್ದು ಪರಿಣಾಮ ಮೆದುಳಿನಲ್ಲೂ ರಕ್ತಸ್ರಾವವಾಗಿದೆ. ಬೆಲ್ಟ್, ಮರದ ತುಂಡು ಅಥವಾ ರಾಡ್ ನಂತಹ ಬಲವಾದ ಆಯುಧದಿಂದ ಹೊಡೆದು ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ.

ಮರಣೋತ್ತರ ವರದಿಯಲ್ಲಿ ದೇಹದ 15 ಕಡೆ ಗಾಯವಾಗಿರುವುದು ಕನ್ ಫರ್ಮ್ ಆಗಿದೆ. ಇದಕ್ಕೆ ಮೊದಲು ಮೈಮೇಲೆ ಆಗಿದ್ದ ಗಾಯಗಳು ನಾಯಿ ಕಚ್ಚಿದ್ದರಿಂದ ಆಗಿದ್ದು ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಆದರೆ ಈಗ ಮರಣೋತ್ತರ ವರದಿಯಲ್ಲೇ ಹಲ್ಲೆ ನಡೆಸಿರುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟದ ಸಂದರ್ಭದಲ್ಲಿ ಕೈ ಹಿಡಿದಿದ್ದ ವಯನಾಡನ್ನೇ ಬಿಡಲಿದ್ದಾರೆ ರಾಹುಲ್ ಗಾಂಧಿ