Select Your Language

Notifications

webdunia
webdunia
webdunia
webdunia

ನಾವು ಯಾರ ಜೊತೆಗೂ ಸಂಧಾನಕ್ಕೆ ರೆಡಿ ಇಲ್ಲ, ನಮ್ಮ ಸೊಸೆಗೆ ಒಂದು ಸರ್ಕಾರಿ ನೌಕರಿ ಕೊಡ್ಸಿ ಸಾಕು: ರೇಣುಕಾಸ್ವಾಮಿ ತಂದೆ ಕಣ್ಣೀರು

Renukaswamy father

Krishnaveni K

ಚಿತ್ರದುರ್ಗ , ಶುಕ್ರವಾರ, 26 ಜುಲೈ 2024 (15:16 IST)
ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಗೀಡಾಗಿದ್ದಾರೆ  ಎನ್ನಲಾದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಇಂದು ನಟ ವಿನೋದ್ ರಾಜ್ ಭೇಟಿ ಮಾಡಿದರು. ಈ ವೇಳೆ ರೇಣುಕಾಸ್ವಾಮಿ ತಂದೆ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಸಂಧಾನದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ಇಂದು ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾದ ನಟ ವಿನೋದ್ ರಾಜ್ 1 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದರು. ತಮ್ಮಿಂದಾದ ಸಹಾಯ ಮಾಡುವುದಾಗಿ ಹೇಳಿದರು. ಈ ವೇಳೆ ವಿನೋದ್ ರಾಜ್ ಗೆ ಧನ್ಯವಾದ ಸಲ್ಲಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗೂ ಕಣ್ಣೀರು ಹಾಕುತ್ತಲೇ ಸ್ಪಷ್ಟನೆ ನೀಡಿದರು.

ಮಾಧ್ಯಮಗಳಲ್ಲಿ ಎರಡು ದಿನಗಳ ಹಿಂದೆ ರೇಣುಕಾಸ್ವಾಮಿ ಕುಟುಂಬ ನಟ ದರ್ಶನ್ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳಬಹುದು ಎಂಬ ಸುದ್ದಿ ಬಂದಿತ್ತು. ಈ ಬಗ್ಗೆ ಇಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಸ್ಪಷ್ಟನೆ ನೀಡಿದರು. ನಾವು ಕಾನೂನಿನ ರೀತಿ ಏನು ಆಗಬೇಕೋ ಆ ರೀತಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಬಯಸುತ್ತೇವೆ ಎಂದಿದ್ದಾರೆ.

‘ನಮ್ಮ ಮಗನನ್ನು ಕೊಂದವರು ಯಾರು ಎಂದು ನಮಗೆ ಗೊತ್ತಿಲ್ಲ. ಯಾರೇ ಆದರೂ ಅವರಿಗೆ ತಕ್ಕ ಶಿಕ್ಷೆಯಾಗಲಿ. ನನ್ನ ತಾಯಿ 98 ವರ್ಷ ಹಾಸಿಗೆ ಹಿಡಿದಿದ್ದಾರೆ. ರೇಣುಕಾಸ್ವಾಮಿಯೇ ಅವರನ್ನು ಎಲ್ಲಾ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ. ಈಗ ನಮಗೆ ಯಾರಿದ್ದಾರೆ? ನನ್ನ ಮಗನ ಕೊಲೆ ವಿಚಾರದಲ್ಲಿ ನಾವು ಸಂಧಾನಕ್ಕೆ ಸಿದ್ಧ ಎಂದು ಮಾಧ್ಯಮಗಳಲ್ಲಿ ಬಂದಿದ್ದು ಇದಕ್ಕೆ ಸ್ಪಷ್ಟನೆ ನೀಡುತ್ತೇನೆ. ನಾವು ಯಾವ ಸಂಧಾನಕ್ಕೂ ಹೋಗುತ್ತಿಲ್ಲ. ನಮ್ಮ ಮಗನ ಸಾವಿಗೆ ಕಾನೂನಿನ ರೀತಿಯೇ ನ್ಯಾಯ ಸಿಗಲಿ ಎಂದು ಬಯಸುತ್ತೇವೆ. ನನ್ನ ಸೊಸೆಗೆ ಸರ್ಕಾರಿ ಖಾಯಂ ನೌಕರಿ ಕೊಡಿ ಎಂದು ಕೇಳಿಕೊಳ್ಳುತ್ತೇವೆ ಅಷ್ಟೇ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಷಾಢ ಶುಕ್ರವಾರ ಚಾಮುಂಡಿ ತಾಯಿ ದರ್ಶನಕ್ಕೆ ಸಾಮಾನ್ಯರಿಗೆ ರಷ್: ವಿಐಪಿಯಾಗಿ ಬಂದ ಸೂರಜ್ ರೇವಣ್ಣ