Select Your Language

Notifications

webdunia
webdunia
webdunia
webdunia

ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಹತ್ಯೆ ಪ್ರಕರಣ, ಪತ್ನಿ ಸೇರಿ ಮೂವರು ಅರೆಸ್ಟ್‌

Belgavi Real Estate Businessman  Santho, Real Estate Businessman Santhosh No More, Belgavi Crime Case

Sampriya

ಬೆಳಗಾವಿ , ಗುರುವಾರ, 17 ಅಕ್ಟೋಬರ್ 2024 (19:26 IST)
ಬೆಳಗಾವಿ: ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ (47) ಹತ್ಯೆ ಪ್ರಕರಣ ಸಂಬಂಧ ಮಗಳು ನೀಡಿದ ದೂರಿನಂತೆ ಪೊಲೀಸರು ಪತ್ನಿ ಹಾಗೂ ಮೂವರನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ನಡೆಸಿದ್ದಾರೆ.

ಮುಖ್ಯ ಆರೋಪಿ, ಉದ್ಯಮಿಯ ಪತ್ನಿ ಉಮಾ (41), ಇವರ ಫೇಸ್‌ಬುಕ್‌ ಸ್ನೇಹಿತ, ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದ ಶೋಭಿತ್‌ ಗೌಡ (30) ಹಾಗೂ ಪವನ್‌ (27) ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ತಲೆಮರೆಸಿಕೊಂಡಿದ್ದಾರೆ.

ಇನ್ನೂ ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಗಳು ಸಂಜನಾ ಠಾಣೆಯಲ್ಲಿ ತನ್ನ ತಾಯಿ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದರು.  ಅ.10ರಂದು ಹೂಳಲಾಗಿದ್ದ ಸಂತೋಷ ಅವರ ಶವವನ್ನು ಬುಧವಾರ ಹೊರತೆಗೆದು ತನಿಖೆ ಕೈಗೊಳ್ಳಲಾಗಿದೆ.

 ಡಿಸಿಪಿ ನಿರಂಜನರಾಜೇ ಅರಸ್‌  ಪ್ರತಿಕ್ರಿಯಸಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಸಂತೋಷ ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಕೈ ಸೇರಿಲ್ಲ. ಅದು ಬಂದ ನಂತರ ಪ್ರಕರಣದ ಸ್ಪಷ್ಟ ರೂಪ ತಿಳಿಯಲಿದೆ ಎಂದುತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಾಯಣ ಕಾಲ್ಪನಿಕ ಎಂದ ಕಾಂಗ್ರೆಸ್ ವಾಲ್ಮೀಕಿ ಜಯಂತಿ ಆಚರಿಸುತ್ತಿದೆ: ಸಿಟಿ ರವಿ ವ್ಯಂಗ್ಯ