Webdunia - Bharat's app for daily news and videos

Install App

ಚಿನ್ನ ಕೊಟ್ಟಿದ್ದು ಯಾರು ಎಂದು ಕೊನೆಗೂ ರಿವೀಲ್ ಮಾಡಿದ ರನ್ಯಾ ರಾವ್

Krishnaveni K
ಶುಕ್ರವಾರ, 14 ಮಾರ್ಚ್ 2025 (12:50 IST)
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಮಾಡಲು ತನಗೆ ಚಿನ್ನ ತಂದುಕೊಟ್ಟವರು ಯಾರು ಎಂದು ನಟಿ ರನ್ಯಾ ರಾವ್ ಕೊನೆಗೂ ಬಾಯ್ಬಿಟ್ಟಿದ್ದಾಳೆ.

ಡಿಆರ್ ಐ ಅಧಿಕಾರಿಗಳ ತನಿಖೆ ವೇಳೆ ನಟಿ ರನ್ಯಾ ರಾವ್ ತನಗೆ ಚಿನ್ನ ತಂದುಕೊಟ್ಟವರು ಯಾರು, ಆತನ ಬಗ್ಗೆ ಮಾಹಿತಿ ನೀಡಿದವರು  ಯಾರು ಎಂದು ಎಳೆ ಎಳೆಯಾಗಿ ವಿವರಿಸಿದ್ದಾಳೆ. ಅದರಂತೆ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತನಗೆ ವ್ಯಕ್ತಿಯೊಬ್ಬ ಚಿನ್ನ ನೀಡಿದ್ದ ಎಂದಿದ್ದಾಳೆ.

ವಿಮಾನ ನಿಲ್ದಾಣದ ಗೇಟ್ ಎ ಡೈನಿಂಗ್ ಲಾಂಜ್ ನಲ್ಲಿ ಒಬ್ಬ ವ್ಯಕ್ತಿಯಿರುತ್ತಾನೆ. ಆತನನ್ನು ಭೇಟಿ ಮಾಡಿ ಚಿನ್ನ ಪಡೆದುಕೊಳ್ಳುವಂತೆ ಇಂಟರ್ನೆಟ್ ಕಾಲ್ ನಲ್ಲಿ ವ್ಯಕ್ತಿಯೊಬ್ಬರು ಹೇಳುತ್ತಾರೆ. ಅದರಂತೆ ನಾನು ಆ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ.

ಅರಬ್ ಶೈಲಿಯ ಬಟ್ಟೆ ತೊಟ್ಟುಕೊಂಡಿದ್ದ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ. ಆತ ಆಫ್ರಿಕಾ-ಅಮೆರಿಕನ್ ಆಕ್ಸೆಂಟ್ ನಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದ. ಆತ ಸುಮಾರು ಆರು ಫೀಟ್ ಉದ್ದ ಇದ್ದ ಮತ್ತು ನೋಡಲು ಸ್ಪುರದ್ರೂಪಿಯಾಗಿದ್ದ ಎಂದು ರನ್ಯಾ ಹೇಳಿದ್ದಾಳೆ.

ಆತ ತನಗೆ ಟಾರ್ಪೊಲಿನ್ ಪ್ಲಾಸ್ಟಿಕ್ ನಲ್ಲಿ ಕವರ್ ಮಾಡಿದ್ದ ಚಿನ್ನ ನೀಡಿದ್ದ. ಇದೇ ಮೊದಲ ಬಾರಿಗೆ ನಾನು ಚಿನ್ನ ಸಾಗಿಸಿದ್ದು. ವಿಮಾನ ನಿಲ್ದಾಣಕ್ಕೆ ಬರುವ ಮೊದಲೇ ಟೇಪ್ ಗಳನ್ನು ರೆಡಿ ಮಾಡಿಕೊಂಡು ಬಂದಿದ್ದೆ. ಅದರಂತೆ ಚಿನ್ನವನ್ನು ಅದರಲ್ಲಿ ಟೇಪ್ ಮಾಡಿ ಮೈಗೆ ಸುತ್ತಿಕೊಂಡಿದ್ದಾಗಿ ರನ್ಯಾ ಬಾಯ್ಬಿಟ್ಟಿದ್ದಾಳೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಣೇಶನ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಕೂರಿಸಬೇಕು ಇಲ್ಲಿದೆ ವಿವರ

ಥೈರಾಯ್ಡ್ ಇದ್ದರೆ ಜೀವನ ಪರ್ಯಂತ ಮಾತ್ರೆ ತೆಗೆದುಕೊಳ್ಳಬೇಕೇ: ಡಾ ಪದ್ಮಿನಿ ಪ್ರಸಾದ್ ಏನು ಹೇಳಿದ್ದರು

ಗಣೇಶ ಹಬ್ಬಕ್ಕೆ ಮತ್ತೆ ಬಂತು ಕಠಿಣ ರೂಲ್ಸ್: ಗಣೇಶನನ್ನು ಕೂರಿಸುವವರು ತಪ್ಪದೇ ಗಮನಿಸಿ

ಗುಡ್ ನ್ಯೂಸ್: ಬಡ ಕ್ಯಾನ್ಸರ್ ರೋಗಿಗಳಿಗಾಗಿ ಡಾ ಸಿಎನ್ ಮಂಜುನಾಥ್ ಮಾಡಿದ್ದೇನು ನೋಡಿ

ಪ್ರಧಾನಿ, ಸಿಎಂ ಪದಚ್ಯುತಿ ಮಸೂದೆ ಮಂಡನೆಗೆ ಸಿದ್ದರಾಮಯ್ಯ ವಿರೋಧ: ನಿಮಗ್ಯಾಕೆ ಭಯ ಸರ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments