Select Your Language

Notifications

webdunia
webdunia
webdunia
webdunia

ವಿಶ್ವನಾಥ್ ಗೆ ಸಚಿವ ಸ್ಥಾನ ಪಕ್ಕಾ ಎಂದ ರಮೇಶ್ ಜಾರಕಿಹೊಳಿ

ವಿಶ್ವನಾಥ್ ಗೆ ಸಚಿವ ಸ್ಥಾನ ಪಕ್ಕಾ ಎಂದ ರಮೇಶ್ ಜಾರಕಿಹೊಳಿ
ಮೈಸೂರು , ಮಂಗಳವಾರ, 28 ಜನವರಿ 2020 (21:04 IST)
ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಲೇಬೇಕು. ಹೀಗಂತ ಹಳ್ಳಿಹಕ್ಕಿ ಪರವಾಗಿ ಗೋಕಾಕ್ ಸಾಹುಕಾರ ಬ್ಯಾಟ್ ಬೀಸಿದ್ದಾರೆ.


ಹೆಚ್.ವಿಶ್ವನಾಥ್ ಉಪ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅವರು ಮಂತ್ರಿ ಆಗಲೇಬೇಕು. ಅವರ ಪರವಾಗಿ ನಾವು ಇದ್ದೇವೆ ಅಂತ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ವಿಶ್ವನಾಥ್ ಅವರನ್ನು ಯಾವುದೇ ಕಾರಣಕ್ಕೂ ನಾವು ಕೈಬಿಡೋದಿಲ್ಲ. ಅವರು ರಾಜೀನಾಮೆ ನೀಡಿದ್ದರಿಂದಲೇ ನಮಗೆಲ್ಲ ಬಲ ಬಂದಿತ್ತು ಅಂತ ಸ್ಮರಿಸಿದ ಜಾರಕಿಹೊಳಿ, ಸೋತ ಕಾರಣಕ್ಕಾಗಿ ಅವರನ್ನು ನಾವು ದೂರ ಮಾಡೋದಿಲ್ಲ ಅಂತ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಡ್ಯಾನ್ಸರ್ ಮೇಲೆ ಲೈಂಗಿಕ ಕಿರುಕುಳ ಆರೋಪ