Select Your Language

Notifications

webdunia
webdunia
webdunia
webdunia

ಸಿಡಿ ಲೇಡಿ ಪ್ರತ್ಯಕ್ಷರಾಗುತ್ತಿದ್ದಂತೇ ದೇವರ ಮೊರೆ ಹೋದ ರಮೇಶ್ ಜಾರಕಿಹೊಳಿ

ಸಿಡಿ ಲೇಡಿ ಪ್ರತ್ಯಕ್ಷರಾಗುತ್ತಿದ್ದಂತೇ ದೇವರ ಮೊರೆ ಹೋದ ರಮೇಶ್ ಜಾರಕಿಹೊಳಿ
ಬೆಂಗಳೂರು , ಬುಧವಾರ, 31 ಮಾರ್ಚ್ 2021 (09:17 IST)
ಬೆಂಗಳೂರು: ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಂತೇ ಇತ್ತ ಶಾಸಕ ರಮೇಶ್ ಜಾರಕಿಹೊಳಿ ದೇವರ ಮೊರೆ ಹೋಗಿದ್ದಾರೆ.

 

ಸಿಡಿ ಲೇಡಿಯ ಆರೋಪಗಳ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಬಂಧನದ ಭೀತಿಯಲ್ಲಿದೆ. ನಿನ್ನೆ ಬೆಳಿಗ್ಗೆಯೇ ಬೆಳಗಾವಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ ಸಂಜೆ ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ಮಾಡಿ ಈ ಪ್ರಕರಣ ತಮಗೆ ಯಾವುದೇ ತೊಂದರೆಯಾಗದಂತೆ ಪ್ರಾರ್ಥನೆ ನಡೆಸಿದ್ದಾರೆ.

ಸ್ವತಃ ಯುವತಿಯೇ ಬಂದು ತನಗಾದ ಅನ್ಯಾಯ ಹೇಳಿಕೊಂಡ ಮೇಲೂ ರಮೇಶ್ ಜಾರಕಿಹೊಳಿಯವರನ್ನು ಯಾಕೆ ಬಂಧಿಸಿಲ್ಲ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಇನ್ನು, ಜಾರಕಿಹೊಳಿ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಬಿಜೆಪಿ ಶಾಸಕರಿಗೆ ಸಿಎಂ ಬಿಎಸ್ ವೈ ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರೇ ರಾಹುಲ್ ಗಾಂಧಿ ಬಳಿ ಹೋಗುವ ಮೊದಲು ಹುಷಾರ್!