Select Your Language

Notifications

webdunia
webdunia
webdunia
webdunia

ಮೈತ್ರಿ ಸಭೆಯಲ್ಲಿ ರಾಹುಲ್ ಭಾಗಿ?

ಮೈತ್ರಿ ಸಭೆಯಲ್ಲಿ ರಾಹುಲ್ ಭಾಗಿ?
ಬೆಂಗಳೂರು , ಶನಿವಾರ, 30 ಮಾರ್ಚ್ 2019 (15:00 IST)
ನಾನು ಸಿದ್ದರಾಮಯ್ಯ ಕಣ್ಣಲ್ಲೆ ಮಾತಾಡಿಕೊಳ್ತಿದ್ದೇವೆ ಹೀಗಂತ ಮಾಜಿ ಸಿಎಂಗೆ ಜೆಡಿಎಸ್ ಹಿರಿಯ ಮುಖಂಡ ಟಾಂಗ್ ನೀಡಿದ್ದಾರೆ.

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ನೀಡಿದ್ದು, ಮೈತ್ರಿ ಸಮಾವೇಶದ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ರಾಹುಲ್ ಗಾಂಧಿ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಕಾಂಗ್ರೆಸ್ - ಜೆಡಿಎಸ್ ನ ಎಲ್ಲಾ ‌ನಾಯಕರು  ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದರು.

ಸಮಾವೇಶದ ರೂಪುರೇಷೆ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರಚಾರ ಅಧಿಕೃತವಾಗಿ ಪ್ರಾರಂಭ ಆಗುತ್ತೆ. ಈಗಾಗಲೇ ನಾವೆಲ್ಲ ಪ್ರಚಾರದಲ್ಲಿ ತೊಡಗಿದ್ದೇವೆ. ಸಿಎಂ ಏಪ್ರಿಲ್ 2 ರಿಂದ ರಾಜ್ಯಾದ್ಯಂತ ಪ್ರಚಾರ ಆರಂಭಿಸುತ್ತಾರೆ. ಮೈಸೂರಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

ಮೈಸೂರಿನಲ್ಲಿ ನಿನ್ನೆ  ಸಿದ್ದರಾಮಯ್ಯ ಸಭೆಗೆ ಜಿ.ಟಿ.ಡಿ ಹೋಗದೇ ಇರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಜಿಟಿ ದೇವೇಗೌಡರ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಇತ್ತು. ಹೀಗಾಗಿ ಜಿಟಿಡಿ ಹೋಗಲು ಆಗಿಲ್ಲ.

ಎರಡು ಮೂರು ದಿನಗಳಲ್ಲಿ ಎಲ್ಲಾರು ಒಟ್ಟಾಗಿ ಪ್ರಚಾರ ಮಾಡ್ತೀವಿ. ಯಾವುದೇ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಎಂದರು ಮೈಸೂರಲ್ಲಿ ಪ್ರಚಾರದ ರೂಪುರೇಷೆ ಬಗ್ಗೆ ಸಿದ್ದರಾಮಯ್ಯ ಬಗ್ಗೆ ನಿಮ್ಮ‌ ಜೊತೆ ಮಾತಾಡಿದ್ರಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಿದ್ದರಾಮಯ್ಯ ಕಣ್ಣಲ್ಲೆ ಮಾತಾಡಿಕೊಳ್ತಿದ್ದೇವೆ ಎಂದ ವಿಶ್ವನಾಥ್ ಮಾಜಿ ಸಿಎಂಗೆ ಟಾಂಗ್ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಷನ್ ಹೈವೋಲ್ಟೇಜ್ ಇಂಡಿಯಾ ಥರ ಆಗಿದೆಯಂತೆ..!