Publish Date: Thu, 03 May 2018 (09:56 IST)
Updated Date: Thu, 03 May 2018 (09:58 IST)
ಬೆಂಗಳೂರು: ಜನಾಶೀರ್ವಾದ ಯಾತ್ರೆಯ ಭಾಗವಾಗಿ ಇಂದು ಬೀದರ್ ಗೆ ಬಂದಿಳಿಯಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಸವಾಲಿಗೆ ತಿರುಗೇಟು ಕೊಡುವ ನಿರೀಕ್ಷೆಯಿದೆ.
ಬೀದರ್ ನಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪರ ಮತ ಯಾಚನೆ ಮಾಡಲಿರುವ ರಾಹುಲ್ ಗಾಂಧಿಗೆ ರಾಜ್ಯ ನಾಯಕರೂ ಸಾಥ್ ಕೊಡಲಿದ್ದಾರೆ. ಈ ವೇಳೆ ಮೊನ್ನೆಯಷ್ಟೇ 15 ನಿಮಿಷ ಕರ್ನಾಟಕ ಸರ್ಕಾರದ ಸಾಧನೆಗಳ ಬಗ್ಗೆ ಚೀಟಿ ನೋಡದೇ ಹೇಳಿ ಎಂದು ಪ್ರಧಾನಿ ಮೋದಿ ಹಾಕಿದ್ದ ಸವಾಲಿಗೆ ಉತ್ತರ ಕೊಡುವ ನಿರೀಕ್ಷೆಯಿದೆ.
ಬೀದರ್ ನಲ್ಲಿ ಬಸ್ ಮೂಲಕ ಸಂಚರಿಸಿ ಮತ ಯಾಚನೆ ಮಾಡಲಿರುವ ರಾಹುಲ್ ಬಳಿಕ ಸಂಜೆ ನಗರದಲ್ಲಿ ನಡೆಯಲಿರುವ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Thu, 03 May 2018 (09:56 IST)
Updated Date: Thu, 03 May 2018 (09:58 IST)