Publish Date: Thu, 03 May 2018 (09:45 IST)
Updated Date: Thu, 03 May 2018 (09:47 IST)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಿಸುವವರೆಗೆ ಕಾಂಗ್ರೆಸ್ ನ ನಾಯಕರೆಲ್ಲರೂ ಸದ್ದು ಮಾಡುತ್ತಿದ್ದರು. ಆದರೆ ಇದೀಗ ನಾಮಪತ್ರ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಒಂಟಿ ಸಲಗದಂತಾದರೇ?
ಹೀಗೊಂದು ಅನುಮಾನ ಇದೀಗ ಕಾಡತೊಡಗಿದೆ. ರಾಜ್ಯದಲ್ಲಿ ಇದೀಗ ಪ್ರಧಾನಿ ಮೋದಿ ಪ್ರಚಾರ ಸಮಾವೇಶಗಳು ನಡೆಯುತ್ತಿದ್ದು, ಇದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕಾಂಗ್ರೆಸ್ ನಿಂದ ಸಿಎಂ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಪ್ರಚಾರ ಕಣದಲ್ಲಿ ಸದ್ದು ಮಾಡುತ್ತಿಲ್ಲ.
ಪ್ರಧಾನಿ ಮೋದಿಯವರ ಟೀಕೆಗಳಿಗೆ ಸಿಎಂ ಮಾತ್ರ ಸಕ್ರಿಯರಾಗಿ ತಿರುಗೇಟು ನೀಡುತ್ತಿದ್ದಾರೆ. ಅಸಲಿಗೆ ಇದು ಕಾಂಗ್ರೆಸ್ ತಂತ್ರವೋ, ಉಳಿದ ನಾಯಕರ ನಿರಾಸಕ್ತಿಯ ಫಲವೋ ಸ್ಪಷ್ಟವಾಗಿಲ್ಲ. ಆದರೆ ಸದ್ಯಕ್ಕಂತೂ ಸಿಎಂ ಸಿದ್ದರಾಮಯ್ಯನವರೇ ಕಾಂಗ್ರೆಸ್ ನಲ್ಲಿ ಎಲ್ಲಕ್ಕಿಂತ ದೊಡ್ಡ ನಾಯಕರಾಗಿ ಕಾಣುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.