Publish Date: Tue, 18 Oct 2022 (08:56 IST)
Updated Date: Mon, 17 Oct 2022 (23:57 IST)
ಬಳ್ಳಾರಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮುಂಜಾನೆ ಏಕಾಏಕಿ ನಗರದ ಹೊರ ವಲಯದಲ್ಲಿರುವ ಇರ್ಷಾದ್ ಅಲಿ ಬಾಬಾ ದರ್ಗಾಕ್ಕೆ ಭೇಟಿ ನೀಡಲು ಮುಂದಾಗಿದ್ದು, ಭದ್ರತಾ ದೃಷ್ಟಿಯಿಂದ ದರ್ಗಾ ಭೇಟಿಯನ್ನು ರದ್ದು ಮಾಡಿದ್ದಾರೆ.
ಬಳ್ಳಾರಿಯ ಸಂಗನಕಲ್ಲು ಹೊರವಲಯದಲ್ಲಿ ವಾಸ್ತವ್ಯ ಇರುವ ರಾಹುಲ್ ಗಾಂಧಿ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಕ್ಯಾಂಪ್ನಿಂದ ದರ್ಗಾ ಭೇಟಿಗೆ ತೆರಳಿದ್ದರು.
ಆದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಕಾರಣ ಪೊಲೀಸರ ನಿಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಬಳ್ಳಾರಿಯ ಕೌಲಬಜಾರ್ ಪ್ರದೇಶದಲ್ಲಿನ ದರ್ಗಾ ಭೇಟಿ ರದ್ದು ಮಾಡಿದ್ದಾರೆ.