Select Your Language

Notifications

webdunia
webdunia
webdunia
webdunia

ಜಗಳ ; ಮಚ್ಚಿನಿಂದ ಕೈ ಕಡಿದ ಸ್ನೇಹಿತ!

ಜಗಳ ; ಮಚ್ಚಿನಿಂದ ಕೈ ಕಡಿದ ಸ್ನೇಹಿತ!
ಹಾಸನ , ಸೋಮವಾರ, 23 ಜನವರಿ 2023 (10:20 IST)
ಹಾಸನ: ರಾಜಕೀಯ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ ಮಚ್ಚಿನಿಂದ ಸ್ನೇಹಿತನ ಕೈ ಕಡಿಯುವ ಮೂಲಕ ಕೊನೆಯಾಗಿದೆ.
 
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸ್ಕವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುಮೂರ್ತಿ ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರ ಮೇಲೆ ಹೊಸ್ಕವಳ್ಳಿಕೊಪ್ಪಲು ಗ್ರಾಮದ ರಮೇಶ್ ಮಚ್ಚಿನಿಂದ ಹಲ್ಲೆ ಮಾಡಿದ ಆರೋಪಿ.
ನಡೆದಿದ್ದೇನು..?:ರಮೇಶ್ ಹಾಗೂ ಗುರುಮೂರ್ತಿ ಇಬ್ಬರೂ ಸ್ನೇಹಿತರಾಗಿದ್ದು, ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಹಣಕಾಸು (ಒoಟಿeಥಿ) ವಿಚಾರ ಮಾತನಾಡುತ್ತಿದ್ದರು.

 ಗುರುಮೂರ್ತಿ ಬಳಿ ರಮೇಶ್ 85 ಸಾವಿರ ರೂ. ಸಾಲ ಪಡೆದಿದ್ದ. ಇದೀಗ ಹಣವನ್ನು ವಾಪಸ್ ಕೊಡುವಂತೆ ಗುರುಮೂರ್ತಿ ಕೇಳಿದ್ದ. ಈ ವೇಳೆ ರಮೇಶ್ ಕೊಡುತ್ತೇನೆ ಎಂದಿದ್ದ. ನಂತರ ಇಬ್ಬರ ನಡುವೆ ರಾಜಕೀಯ ಚರ್ಚೆ ಶುರುವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಪ್ರಚಾರ: ಕುಮಾರಸ್ವಾಮಿ