Publish Date: Sat, 29 Apr 2023 (17:40 IST)
Updated Date: Sat, 29 Apr 2023 (18:35 IST)
ಮೋದಿ ರೋಡ್ ಶೋ ಹಿನ್ನೆಲೆ ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ರಸ್ತೆ ಮಧ್ಯೆ ನಿರ್ಬಂಧಕ್ಕಾಗಿ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ.ಇದೆ ವೇಳೆ ಆಗಮಿಸಿದ ರೋಗಿ ಕರೆತಂದ ಆ್ಯಂಬುಲೆನ್ಸ್ ನ್ನ ಪ್ರಾರಂಭದಲ್ಲಿ ಪೊಲೀಸರು ತಡೆದಿದ್ದಾರೆ.ಆ್ಯಂಬುಲೆನ್ಸ್ ನಲ್ಲಿ ರೋಗಿ ಇದ್ದಾರೆ ಎಂದು ಪೊಲೀಸರಿಗೆ ಚಾಲಕ ಹೇಳಿದ .ಕೂಡಲೇ ಆ್ಯಂಬುಲೆನ್ಸ್ ತೆರಳಲು ಪೊಲೀಸರು ಬ್ಯಾರಿಕೇಡ್ ತೆಗೆದಿದ್ರು.ಬಳಿಕ ಅದೇ ಮಾರ್ಗದಲ್ಲಿ ಸವಾರರು ನುಕ್ಕ ನುಗ್ಗಲು ಮಾಡಿಕೊಂಡು ಹೋರಟಿದ್ರು.ಬೈಕ್ ಸವಾರರನ್ನು ಪೊಲೀಸರು ತಡೆದಿದಕ್ಕೆ ಪೊಲೀಸರ ವಿರುದ್ಧ ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದಾರೆ.ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅನುಮತಿ ಕೊಟ್ಟು ಪೊಲೀಸರು ತೆರಳಿಸಿದ್ದಾರೆ